ಸ್ಟಾರ್‌ ಹಾಡಲ್ಲಿ ಸುದೀಪ್‌ ಇಲ್ಲ, ಸಚಿವರೇ ಸಂಪರ್ಕಿಸಿದರೂ ಸಿಗಲ್ಲಿಲ್ಲ; ಇದಕ್ಕೆ ಕಾರಣವೇನು?

First Published Jun 7, 2020, 3:29 PM IST

ಸ್ಯಾಂಡಲ್‌ವುಡ್‌ ನಟ-ನಟಿಯರು ಹಾಗೂ ಕ್ರಿಕೆಟಿಗರು ಒಟ್ಟಾಗಿ ಕಾಣಿಸಿಕೊಂಡ 'ಬದಲಾಗು ನೀನು ಬದಲಾಯಿಸು' ಹಾಡಿನಲ್ಲಿ ಕಿಚ್ಚ ಸುದೀಪ್‌ ಮಿಸ್ಸಿಂಗ್. ಎಲ್ಲರೂ ಇದ್ದಾರೆ ಆದರೆ ಕಿಚ್ಚ ಇಲ್ಲ ಎಂದ ಅಭಿಮಾನಿಗಳಿಗೆ ಸಚಿವ ಸುಧಾಕರ್‌ ಸ್ಪಷ್ಟನೇ ನೀಡಿದ್ದಾರೆ. 

ಕೊರೋನಾ ನಂತರ ದಿನಗಳ ಬಗ್ಗೆ ಅರಿವು ಮೂಡಿಸುವ ಹಾಡು 'ಬದಲಾಗು ನೀನು ಬದಲಾಯಿಸು'.
undefined
ವೈದ್ಯಕೀಯ ಶಿಕ್ಷಣ ಇಲಾಖೆಯು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಿರ್ಮಿಸಿದ ದೃಶ್ಯ ರೂಪ.
undefined
ಶುಕ್ರವಾರ (5 ಜೂನ್) ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಡುಗಡೆ ಮಾಡಿದ್ದರು.
undefined
ಈ ಹಾಡಿನಲ್ಲಿ ಕನ್ನಡ ಚಿತ್ರರಂಗದ ಬಹುತೇಕ ನಟ-ನಟಿಯರು ಹಾಗೂ ಕ್ರಿಕೆಟರ್‌ಗಳು ಕಾಣಿಸಿಕೊಂಡಿದ್ದಾರೆ.
undefined
ಹಾಡಿನಲ್ಲಿ ಕಿಚ್ಚ ಸುದೀಪ್‌, ಮಿಸ್ಸಿಂಗ್ ಎಂದು ನಿರ್ದೇಶಕ ಪವನ್ ಒಡೆಯರ್‌ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದರು.
undefined
ಈ ಗೊಂದಲದ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್‌ ಸ್ಪಷ್ಟನೆ ನೀಡಿದ್ದಾರೆ.
undefined
ಪ್ರತಿಯೊಬ್ಬ ಸೆಲೆಬ್ರಿಟಿಗಳನ್ನು ವೈಯಕ್ತಿಕವಾಗಿ ಸಂಪರ್ಕಿಸಿದ ಸುಧಾಕರ್‌ ಅವರಿಗೆ ಸುದೀಪ್‌ ಅವರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ.
undefined
ಸುದೀಪ್‌ ಮ್ಯಾನೇಜರ್‌ಗೆ ಮಾಹಿತಿ ನೀಡಲು ತಿಳಿಸಿದ್ದೆವು ಆದರೆ ಇದಕ್ಕೆ ಒಪ್ಪಿಗೆ ನೀಡದೆ ಇರಲು ಕಾರಣ ಏನೆಂದು ತಿಳಿದು ಬಂದಿಲ್ಲ ಎಂದಿದ್ದಾರೆ.
undefined
ಬಹುತೇಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
undefined
'ಬದಲಾಗು ನೀನು ಬದಲಾಯಿಸು' ರಿಲೀಸ್‌ ಆದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದೆ.
undefined
click me!