ಮುಂದುವರಿದ ಡಿಕೆ​ಶಿ ‌ಟೆಂಪಲ್ ರನ್: ರಾಜ್ಯದ ಮುಖ್ಯಮಂತ್ರಿ ಗಾದಿಗಾಗಿ ಈಶ್ವರನಿಗೆ ರುದ್ರಾಭಿಷೇಕ!

First Published Apr 22, 2023, 12:31 PM IST

ಇಂದು ಮುಂಜಾನೆ ಐದು ಗಂಟೆಗೆ ಸ್ವ-ಕ್ಷೇತ್ರ ಕನಕಪುರ ತಾಲೂಕಿನಲ್ಲಿರುವ ಮಾಳಗಾಳು ಗ್ರಾಮದ ಈಶ್ವರ ದೇವಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ರಾಮನಗರ (ಏ.22): ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜಕಾರಣಿಗಳು ದೇವರ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ದೈವ ಭಕ್ತರು. 

ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಐದು ಗಂಟೆಗೆ ಸ್ವ-ಕ್ಷೇತ್ರ ಕನಕಪುರ ತಾಲೂಕಿನಲ್ಲಿರುವ ಮಾಳಗಾಳು ಗ್ರಾಮದ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾಜ್ಯದ ಮುಖ್ಯಮಂತ್ರಿಗಾದಿಗಾಗಿ ರುದ್ರಾಭಿಷೇಕವನ್ನು ಸಹ ಮಾಡಿಸಿದರು. ಅರ್ಕಾವತಿ ನದಿಯಲ್ಲಿ ಸ್ನಾನ ಮಾಡಿ, ಮಡಿ ಬಟ್ಟೆಯಲ್ಲಿ ದೇವಸ್ಥಾನಕ್ಕೆ ತೆರಳಿದರು. 

Latest Videos


ಬಳಿಕ ಸನ್ನಿಧಿಯಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ನೆರವೇರಿಸಿ ಈಶ್ವರನ ಆಶೀರ್ವಾದ ಪಡೆದುಕೊಂಡರು. ಇನ್ನು ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಗೇರಲಿ ಎಂದು ಗ್ರಾಮಸ್ಥರು ಕೂಡಾ ಪೂಜೆ ಪುರಸ್ಕಾರ ಮಾಡಿಸಿದ್ದಾರೆ.

ಡಿಕೆ​ಶಿಗೆ ಬಿಗ್‌ ರಿಲೀಫ್‌: ಸಾಕಷ್ಟು ಕುತೂ​ಹಲ ಮೂಡಿ​ಸಿದ್ದ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಕನ​ಕ​ಪುರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ಸಲ್ಲಿ​ಸಿದ್ದ ನಾಮ​ಪತ್ರ ಅಂಗೀ​ಕಾ​ರ​ಗೊಂಡಿದೆ. ಡಿ.ಕೆ.​ಶಿ​ವ​ಕು​ಮಾರ್‌ ರವರ ಉಮೇ​ದು​ವಾ​ರಿಕೆ ತಿರ​ಸ್ಕೃ​ತ​ಗೊ​ಳ್ಳುವ ಆತಂಕದ ಹಿನ್ನೆ​ಲೆ​ಯಲ್ಲಿ ಅವರ ಸಹೋ​ದರ ಸಂಸದ ಡಿ.ಕೆ.​ಸು​ರೇಶ್‌ ಕೊನೆ ಘಳಿ​ಗೆ​ಯಲ್ಲಿ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ನಾಮ​ಪತ್ರ ಸಲ್ಲಿ​ಸಿ​ದ್ದರು.

ತಾಲೂಕು ಕಚೇ​ರಿ​ಯಲ್ಲಿ ಬೆಳಗ್ಗೆ 11 ಗಂಟೆಗೆ ಚುನಾವಣಾಧಿಕಾರಿ ಸಂತೋಷ್‌ ಹಾಗೂ ಚುನಾವಣಾ ವೀಕ್ಷಕ ಜಿ.ಎಸ್‌ ಪಾಂಡದಾಸ್‌ ನೇತೃತ್ವದಲ್ಲಿ ನಾಮಪತ್ರ ಪರಿಶೀಲನಾ ಕಾರ್ಯ ಆರಂಭಗೊಂಡಿತು. ಡಿ.ಕೆ.​ಶಿ​ವ​ಕು​ಮಾರ್‌ ನಾಮ​ಪತ್ರದಲ್ಲಿ ಯಾವುದೇ ಲೋಪ​ದೋ​ಷ​ಗಳಿಲ್ಲ. ಎಲ್ಲವೂ ಕ್ರಮ​ಬ​ದ್ಧ​ವಾ​ಗಿದೆ ಎಂದು ಚುನಾ​ವ​ಣಾ​ಧಿ​ಕಾ​ರಿ​ಗಳು ಮಾನ್ಯ ಮಾಡಿ​ದರು. ಈ ಮೂಲಕ ನಾಮ​ಪತ್ರ ತಿರ​ಸ್ಕಾ​ರ​ಗೊ​ಳ್ಳ​ಬ​ಹುದು, ರಾಜ​ಕೀಯ ಭವಿಷ್ಯ ಏನಾ​ಗ​ಬ​ಹುದು ಎಂಬ ಆತಂಕ​ದ​ಲ್ಲಿದ್ದ ಡಿಕೆ​ಶಿಗೆ ಬಿಗ್‌ ರಿಲೀಫ್‌ ಸಿಕ್ಕಂತಾ​ಗಿದೆ.

ಆಸ್ತಿ ಖರೀದಿ ಹಾಗೂ ತೆರಿಗೆ ವಿಚಾ​ರ​ದಲ್ಲಿ ಆರೋ​ಪ​ಗ​ಳನ್ನು ಎದು​ರಿ​ಸು​ತ್ತಿ​ರುವ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ನಾಲ್ಕು ದಿನ​ಗಳ ಹಿಂದಷ್ಟೆಐಟಿ ಅಧಿ​ಕಾ​ರಿ​ಗಳು ನೋಟಿಸ್‌ ನೀಡಿ ವಿಚಾ​ರ​ಣೆಗೆ ಬರಲು ಸೂಚನೆ ನೀಡಿ​ದ್ದರು. ಅಲ್ಲದೆ, ಏಪ್ರಿಲ್‌ 17ರಂದು ನಾಮ​ಪತ್ರ ಸಲ್ಲಿ​ಸಿದ ನಂತರ ಐಟಿ ಅಧಿ​ಕಾ​ರಿ​ಗಳು ಕನ​ಕ​ಪು​ರಕ್ಕೆ ಬಂದು ಆಸ್ತಿ ವಿವ​ರದ ಮಾಹಿತಿ ಪಡೆ​ದಿ​ದ್ದರು. 

ಈ ಎಲ್ಲಾ ಬೆಳ​ವ​ಣಿ​ಗೆ​ಗ​ಳಿಂದಾಗಿ ನಾಮ​ಪತ್ರ ತಿರ​ಸ್ಕೃ​ತ​ವಾ​ಗ​ಬ​ಹುದು ಎಂಬ ಆತಂಕ ಶಿವ​ಕು​ಮಾರ್‌ ಅವ​ರಿಗೆ ಕಾಡು​ತ್ತಿತ್ತು. ಏನೇ ಆಗಲಿ ಕ್ಷೇತ್ರ ಕೈತಪ್ಪಿ ಹೋಗ​ಬಾ​ರ​ದೆಂದು ಸಹೋ​ದರ ಡಿ.ಕೆ.​ಸು​ರೇಶ್‌ ಅವ​ರಿಂದಲೂ ಉಮೇ​ದು​ವಾ​ರಿಕೆ ಸಲ್ಲಿ​ಸಿ​ದ್ದರು. ಕನ​ಕ​ಪುರ ಕ್ಷೇತ್ರ ಅಭ್ಯ​ರ್ಥಿ​ಗಳ ನಾಮ​ಪತ್ರ ಪರಿ​ಶೀ​ಲನೆ ಕಾರ್ಯದ ಮೇಲೆ ಎಲ್ಲರ ಗಮನ ಕೇಂದ್ರೀ​ಕೃ​ತ​ವಾ​ಗಿ​ತ್ತು. ಇದೀಗ ಡಿಕೆಶಿ ಸ್ಪರ್ಧೆ ಖಚಿ​ತ​ವಾ​ಗಿದೆ. ಈಗ ನಾಮ​ಪತ್ರ ಅಂಗೀ​ಕಾ​ರ​ವಾದ ಹಿನ್ನೆ​ಲೆ​ಯಲ್ಲಿ ಡಿ.ಕೆ.​ಸು​ರೇಶ್‌ ನಾಮ​ಪತ್ರ ಹಿಂಪ​ಡೆ​ಯುವ ಸಾಧ್ಯತೆ ಇದೆ. 

click me!