ಬುಧವಾರ ವೆಂಕಟರಮಣ ಸ್ವಾಮಿ ದೇವಸ್ಥಾನ, ಕನಕಪುರದ ದೇಗುಲಮಠ, ಮಳಗಾಳು ಮಹಾದೇಶ್ವರ ಸ್ವಾಮಿ, ಮರಳೆ ಗವಿಮಠ, ಶಿವಗಿರಿ ಕ್ಷೇತ್ರದ ಶಿವಾಲದಮೂರ್ತಿ ಅನ್ನದಾನ ಮಠ, ಕಬ್ಬಾಳಮ್ಮನ ದೇವಸ್ಥಾನ ಸೇರಿದಂತೆ ಕ್ಷೇತ್ರದ ವಿವಿಧ ಮಠಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದ ಡಿ.ಕೆ. ಸುರೇಶ್. ಇದೇ ವೇಳೆ ರಾಮನಗರದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಕ್ಕೆ ತೆರಳಿ, ಶ್ರೀಗಳ ಆಶೀರ್ವಚನ ಪಡೆದ. ಕ್ಷೇತ್ರದ ಜನರು ತೋರಿಸುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಸದಾ ಚಿರಋಣಿ ಎಂದು ಹೇಳಿದ್ದರು.