ಸಿಎಂ ಸ್ಥಾನಕ್ಕಾಗಿ ಸಿಡಿಯಲು ಶುರುವಾದ ಬಂಡೆ, ಕಾರ್ಯ ಯಶಸ್ಸಿಗೆ ದೇವರ ಮೊರೆ ಹೋದ ಡಿಕೆಶಿ

Published : Nov 22, 2025, 11:35 AM IST

ರಾಜ್ಯ ರಾಜಕಾರಣದಲ್ಲಿ ನವೆಂಬರ್‌ ಕ್ರಾಂತಿಯ ಸುಳಿವು ಸಿಕ್ಕಿದ್ದು, ಸಿಎಂ ಬದಲಾವಣೆಯ ಚರ್ಚೆಗಳು ಗರಿಗೆದರಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಸಮರದ ಮಧ್ಯೆ, ಡಿಕೆಶಿ ತಮ್ಮ ನಿವಾಸದಲ್ಲಿ ಸಿಎಂ ಗದ್ದುಗೆ ಏರಲು ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

PREV
16

ರಾಜ್ಯ ರಾಜಕಾರಣದಲ್ಲಿ ನವೆಂಬರ್‌ ಕ್ರಾಂತಿ ಅಧಿಕೃತವಾಗಿ ಶುರುವಾದ ಲಕ್ಷಣ ಕಾಣುತ್ತಿದೆ. ಬೆಂಕಿ ಇಲ್ಲದೆ ಹೊಗೆ ಆಡೋದಿಲ್ಲ ಎನ್ನುವ ಮಾತಿನಂತೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳು ಕೂಡ ಸಿಎಂ ಬದಲಾಗುವ ಲಕ್ಷಣಕ್ಕೆ ಬುನಾದಿ ಹಾಕಿದೆ.

26

ಒಂದೆಡೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ ಹೇಳಿದರೆ 5 ವರ್ಷ ನಾನೇ ಸಿಎಂ ಎಂದಿದ್ದರೆ, ಇನ್ನೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್‌ ಕಾಂಗ್ರೆಸ್‌ 140 ಶಾಸಕರು ಕೂಡ ನಮ್ಮವರು ಎಂದಿದ್ದಾರೆ.

36

ಸಿಎಂ ಸ್ಥಾನಕ್ಕಾಗಿ ಬಂಡೆ ಸಿಡಿಯಲು ಶುರುವಾಗಿರುವ ನಡುವೆ, ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಶುಕ್ರವಾರ ವಿಶೇಷ ಪೂಜೆ ನಡೆದಿದೆ.

46

ಸಿಎಂ ಗದ್ದುಗೇರಲು ಡಿಕೆಶಿ ಅಕ್ಷರಶಃ ದೇವರ ಮೊರೆ ಹೋಗಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಡಿಸಿಎಂ ಬೇಡಿಕೊಂಡಿದ್ದಾರೆ.

56

ಶುಕ್ರವಾರ ಜೇನುಕಲ್ಲು ಸಿದ್ದೇಶ್ವರ ಸ್ವಾಮೀಜಿ ಪಲ್ಲಕ್ಕಿ ಡಿಕೆಶಿ ನಿವಾಸಕ್ಕೆ ಆಗಮಿಸಿತ್ತು. ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ಪೂಜೆ ನಡೆಸಿದ್ದಾರೆ.

66

ಹಾಸನ ಜಿಲ್ಲೆ ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಗೆ ಡಿಕೆ ಶಿವಕುಮಾರ್‌ ಹಾಗೂ ಅವರ ಪತ್ನಿ ಉಷಾ ಶಿವಕುಮಾರ್‌ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Read more Photos on
click me!

Recommended Stories