ಬಳಿಕ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿಗಳ ಜೊತೆ ದೇವೇಂದ್ರ ಪಡ್ನವೀಸ್ ಚರ್ಚೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ದೇವೇಂದ್ರ ಪಡ್ನವೀಸ್ ಅವರು ನಗರದ ಸಿದ್ದೇಶ್ವರ ದೇವಸ್ಥಾನದತ್ತ ತೆರಳಿದ್ದಾರೆ. ದೇವೇಂದ್ರ ಪಡ್ನವೀಸ್ ಅವರಿಗೆ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್. ಎಸ್. ಪಾಟೀಲ್ ಕೂಚಬಾಳ ಹಾಗೂ ಇನ್ನಿತರ ಮುಖಂಡರು ಸಾಥ್ ನೀಡಿದ್ದಾರೆ.