ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದ ಡಿ.ಕೆ.ಶಿವಕುಮಾರ್‌

First Published Apr 24, 2023, 2:30 AM IST

ಕುಂದಾಪುರ(ಏ.24):  ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭಾನುವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಉಷಾ ಡಿ.ಕೆ.ಶಿವಕುಮಾರ್‌, ಬೈಂದೂರು ಕಾಂಗ್ರೆಸ್‌ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ, ಕುಂದಾಪುರ ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಪಕ್ಷದ ಪ್ರಮುಖರಾದ ಯು.ಬಿ.ಶೆಟ್ಟಿ, ಬಾಬು ಶೆಟ್ಟಿತಗ್ಗರ್ಸೆ, ಎಂ.ಎ.ಗಫäರ್‌, ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ದಿನೇಶ್‌ ಪುತ್ರನ್‌, ವಿಕಾಸ್‌ ಹೆಗ್ಡೆ, ರಾಜು ಎಸ್‌. ಪೂಜಾರಿ, ಪ್ರದೀಪ್‌ ಶೆಟ್ಟಿಗುಡಿಬೆಟ್ಟು, ಶಂಕರ್‌ ಪೂಜಾರಿ ಯಡ್ತರೆ, ಹರೀಶ್‌ ತೋರ್ಳಾ ಕೊಲ್ಲೂರು, ರಮೇಶ್‌ ಗಾಣಿಗ ಕೊಲ್ಲೂರು, ರಂಜಿತ್‌ ಕುಮಾರ್‌ ಶೆಟ್ಟಿ, ಅರವಿಂದ್‌ ಪೂಜಾರಿ ಪಡುಕೋಣೆ, ಅನೀಶ್‌ ಪೂಜಾರಿ ಬೈಂದೂರು ಇದ್ದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿಅವರು, ಡಿ.ಕೆ.ಶಿವಕುಮಾರ ಹಾಗೂ ಪತ್ನಿ ಉಷಾ ಡಿ.ಕೆ.ಶಿವಕುಮಾರ ಅವರನ್ನು ಗೌರವಿಸಿದರು.

Latest Videos


ಪ್ರಧಾನ ಅರ್ಚಕರಾದ ಎನ್‌ .ನರಸಿಂಹ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಧ್ಯಾ ರಮೇಶ್‌, ರತ್ನಾ ರಮೇಶ್‌ ಕುಂದಾರ್‌ ಇದ್ದರು.

ಕೊಲ್ಲೂರಿನ ಮೂಕಾಂಬಿಕಾ ದೇಗುಲದಲ್ಲಿ ಪತ್ನಿ ಉಷಾ ಅವರ ಜತೆ ಪೂಜೆ ಸಲ್ಲಿಸಿದ ಬಳಿಕ ವಿಶೇಷ ಪೂಜೆ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. 

click me!