Congress Protest: ಸೌಧಕ್ಕೆ ಹಾಸಿಗೆ-ದಿಂಬು.. ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಅಹೋರಾತ್ರಿ ಧರಣಿ

Published : Feb 18, 2022, 01:13 AM ISTUpdated : Feb 18, 2022, 01:15 AM IST

ಬೆಂಗಳೂರು(ಫೆ. 18)  ಸಚಿವ ಈಶ್ವರಪ್ಪ (KS Eshwarappa) ಅವರ ರಾಜೀನಾಮೆಯನ್ನು ಕೂಡಲೇ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ (Congress) ನಾಯಕರು ವಿಧಾನಸಭೆಯಲ್ಲೇ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.  ಸ್ಪೀಕರ್ ಆದಿಯಾಗಿ ಬಿಜೆಪಿ (BJP) ಹಿರಿಯ ನಾಯಕರು ಆಗಮಿಸಿ ಮನವೊಲಿಸಿದರೂ ಮಾತು  ಕೇಳಿಲ್ಲ.   

PREV
14
Congress Protest: ಸೌಧಕ್ಕೆ ಹಾಸಿಗೆ-ದಿಂಬು.. ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಅಹೋರಾತ್ರಿ ಧರಣಿ

ಸದನದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಧರಣಿ ಕೈ ಬಿಡುವಂತೆ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಮಾತುಕತೆ ವಿಫಲವಾಗಿದೆ.

ವಿಧಾನ ಸೌಧ ರಣಾಂಗಣ

24

ಕೆಎಸ್ ಈಶ್ವರಪ್ಪ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್​​ ನಾಯಕರು  ಅಹೋರಾತ್ರಿ ಧರಣಿ ಆರಂಭಿಸಿದ್ದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆದಿಯಾಗಿ ಎಲ್ಲ ನಾಯಕರು ಇದ್ದಾರೆ.

34

ಸ್ಪೀಕರ್ ಆದೇಶದಂತೆ ಕಾಂಗ್ರೆಸ್ ನಾಯಕರಿಗೆ ಊಟ ಮತ್ತು ಹಾಸಿಗೆ ವ್ಯವಸ್ಥೆ ಮಾಡಿಸಲಾಗಿದೆ.  ಈಶ್ವರಪ್ಪ ರಾಜೀನಾಮೆ ಪಡೆದುಕೊಳ್ಳುವವರೆಗೂ ಹೋರಾಟ ನಿರಂತರ ಎಂದು ಎಚ್ಚರಿಕೆ  ನೀಡಿದ್ದಾರೆ.

44
Congress Protest

ಅಹೋರಾತ್ರಿ ಧರಣಿಯಲ್ಲಿ ವಿಧಾನಸಭೆಯ ಒಟ್ಟು 69 ಜನ ಕಾಂಗ್ರೆಸ್‌ ಸದಸ್ಯರ ಪೈಕಿ ಸಿದ್ದರಾಮಯ್ಯ, ಯು.ಟಿ.ಖಾದರ್‌, ಡಿ.ಕæ.ಶಿವಕುಮಾರ್‌ ಸೇರಿದಂತೆ 33 ಸದಸ್ಯರು ಮಾತ್ರ ಭಾಗವಹಿಸಿದ್ದರು. ಇನ್ನು ವಿಧಾನ ಪರಿಷತ್‌ನ 26 ಸದಸ್ಯರ ಪೈಕಿ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹ್ಮದ್‌, ಪ್ರಕಾಶ್‌ ರಾಥೋಡ್‌, ಗೋವಿಂದರಾಜು ಸೇರಿದಂತೆ ಒಟ್ಟು 17 ಮಂದಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

Read more Photos on
click me!

Recommended Stories