ಕೃಷಿಯೆಂದರೆ ಕೇವಲ ಉದ್ಯೋಗವಲ್ಲ, ಜೀವನ ಮಾರ್ಗ ಎಂದು ತೋರಿಸಿಕೊಟ್ಟ 11 ಸ್ಟಾರ್‌ ನಟರು!

First Published Apr 18, 2022, 12:15 PM IST

ಅನೇಕ ಸೆಲೆಬ್ರಿಟಿಗಳು ತಮ್ಮ ದೊಡ್ಡ ಐಷಾರಾಮಿ ಬಂಗಲೆ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದರೆ, ಇನ್ನೂ ಅನೇಕರು ರೈತರಾಗಿ ಎರಡನೇ ವೃತ್ತಿಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಕೆಲವರು ಸಂಪೂರ್ಣವಾಗಿ ತಮ್ಮ ವೃತ್ತಿ ಜೀವನ ಬಿಡಲು ಇಚ್ಛಿಸದಿದ್ದರೂ, ಅನೇಕರು ರಾಸಾಯನಿಕವಾಗಿ-ಸಂಸ್ಕರಿಸಿದ ಉತ್ಪನ್ನಗಳಿಂದ ಬೇಸತ್ತು ತಾವೇ ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಹೀಗಿರುವಾಗ ತಮ್ಮ ಹೊಲಗಳಲ್ಲಿ ತರಕಾರಿಗಳು ಮತ್ತು ಧಾನ್ಯಗಳನ್ನು ಬಿತ್ತನೆ, ಉಳುಮೆ ಮತ್ತು ಕೊಯ್ಲು ಮಾಡಿ ಆನಂದಿಸುವ ಸ್ಟಾರ್ ನಟ, ನಟಿಯರ ಪಟ್ಟಿ ಇಲ್ಲಿದೆ. ಈ ನಟರು ವ್ಯವಸಾಯವನ್ನು ಕೈಗೆತ್ತಿಕೊಂಡು ಅದು ಕೇವಲ ಉದ್ಯೋಗವಲ್ಲ ಆದರೆ ಜೀವನ ವಿಧಾನ ಎಂದು ಸಾಬೀತುಪಡಿಸಿದ್ದಾರೆ.

ಆರ್‌. ಮಾಧವನ್

ಆರ್ ಮಾಧವನ್ ತಾನು ಬಂಜರು ಭೂಮಿಯನ್ನು ಖರೀದಿಸಿ ಅದನ್ನು ಹಚ್ಚ ಹಸಿರಿನ ತೆಂಗಿನ ತೋಟವನ್ನಾಗಿ ಮಾಡಿದ್ದಾರೆ ಎಂದು ಇತ್ತೀಚೆಗೆ ಬಹಿರಂಗಪಡಿಸಿದರು. ಆಧುನಿಕ, ಸಾವಯವ ಮತ್ತು ಪ್ರಾಚೀನ ಸ್ಥಳೀಯ ಕೃಷಿ ವಿಧಾನಗಳನ್ನು ಬಳಸಿಕೊಂಡು ಮಣ್ಣನ್ನು ಪುನರುಜ್ಜೀವನಗೊಳಿಸಲು ಐದು ವರ್ಷಗಳ ಪರಿಶ್ರಮ ಬೇಕಾಯ್ತು. ಆದರೆ ಅದರ ಅಂತಿಮ ಫಲಿತಾಂಶವು ಬಹಳ ಸುಂದರವಾಗಿದೆ ಎಂದಿದ್ದಾರೆ.
 

ರಾಜೇಶ್ ಕುಮಾರ್

ಸುಮಾರು ಎರಡು ವರ್ಷಗಳ ಹಿಂದೆ, ಹಿಟ್ ಟಿವಿ ಶೋ ಸಾರಾಭಾಯ್ ವಿಎಸ್ ಸಾರಾಭಾಯಿಯಲ್ಲಿ, ರೋಸೆಶ್ ಸಾರಾಭಾಯ್ ಪಾತ್ರದಲ್ಲಿ ಕಾಣಿಸಿಕೊಂಡು  ತಮ್ಮ ಅದ್ಭುತ ನಟನೆಯಿಂದ ನಮ್ಮನ್ನು ನಗಿಸಿದ ಕುಮಾರ್, ಬರ್ಮಾವನ್ನು ಸ್ಮಾರ್ಟ್ ಗ್ರಾಮವನ್ನಾಗಿ ಮಾಡಲು ಸಾವಯವ ಪರ್ಯಾಯಗಳಿಗೆ ರಾಸಾಯನಿಕಗಳನ್ನು ತಿರಸ್ಕರಿಸುವ ತತ್ವಶಾಸ್ತ್ರವಾದ ಶೂನ್ಯ-ಬಜೆಟ್ ಆಧ್ಯಾತ್ಮಿಕ ಕೃಷಿಯನ್ನು ಕೈಗೆತ್ತಿಕೊಂಡರು.
 

Latest Videos


ನವಾಜುದ್ದೀನ್ ಸಿಧ್ಧಿಕಿ

ಸಿನಿಮಾ ಜಗತ್ತಿಗೆ ಕಾಲಿಡುವ ಮೊದಲು, ನವಾಜುದ್ದೀನ್ ಸಿದ್ದಿಕಿ ಓರ್ವ ರೈತ ಆಗಿದ್ದರು. ಬಾಲಿವುಡ್‌ನಲ್ಲಿ ಗಳಿಸಿದ ಯಶಸ್ಸಿನ ನಂತರವೂ, ಅವರು ತಮ್ಮ ಜೀವನದಲ್ಲಿ ಸುಮಾರು 20 ವರ್ಷಗಳವರೆಗೆ ನಡೆಸಿ ಬಂದಿದ್ದ ಕಾಯಕವನ್ನು ಮರೆಯಲಿಲ್ಲ, ಬದಲಾಗಿ ನಟನೆ ಜೊತೆಗೆ ಅದನ್ನೂ ಮುಂದುವರೆಸಿದರು. ನಟನೆಯಿಂದ ಬಿಡುವು ಸಿಕ್ಕಾಗೆಲ್ಲಾ ಯುಪಿಯಲ್ಲಿರುವ ತಮ್ಮ ಜಮೀನಿನಲ್ಲಿ ಮಣ್ಣು ಉಳುಮೆ ಮಾಡುತ್ತಾರೆ. ಅವನು ಆಗಾಗ್ಗೆ ತನ್ನ ಕುಟುಂಬದ ಒಡೆತನದ ಸಾಸಿವೆ ಹೊಲದ ಫೋಟೋಗಳನ್ನೂ ಹಂಚಿಕೊಳ್ಳುತ್ತಾರೆ.
 

ಧರ್ಮೇಂದ್ರ

ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಹಿಡಿದು ತಾಜಾ ತರಕಾರಿಗಳಾದ ಟೊಮ್ಯಾಟೊ ಮತ್ತು ಕೋಸುಗಡ್ಡೆ ಬೆಳೆಯುವವರೆಗೆ, ಧರ್ಮೇಂದ್ರ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕೃಷಿ ಜೀವನದ ನೋಟವನ್ನು ಅಭಿಮಾನಿಗಳಿಗೆ ನೀಡುತ್ತಲೇ ಇರುತ್ತಾರೆ. ವಾಸ್ತವವಾಗಿ, ಲಾಕ್‌ಡೌನ್‌ನಲ್ಲಿ, ಅವರು ಸಾವಯವ ಕೃಷಿ ಮಾಡುವುದರಲ್ಲಿ ಸಮಯ ಕಳೆದಿದ್ದರು.
 

ಪ್ರಕಾಶ್ ರಾಜ್

ಪ್ರಕಾಶ್ ರಾಜ್ ಸುಮಾರು ಒಂದು ದಶಕದ ಹಿಂದೆ ಗಿಡ ನೆಡಲು ಕೆಲವು ಎಕರೆ ಜಮೀನು ಖರೀದಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಅಲ್ಲಿ ತರಕಾರಿ ಮತ್ತು ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. "ಕೃಷಿಯನ್ನು ಕೈಗೆತ್ತಿಕೊಂಡ ನಂತರ ನಾನು ಹೆಚ್ಚು ಸುಂದರ, ತಾಳ್ಮೆ ಮತ್ತು ಶಾಂತಿಯುತನಾಗಿದ್ದೇನೆ" ಎಂದು ಅವರು ಟೈಮ್ಸ್‌ ಆಫ್‌ ಇಂಡಿಯಾಗೆ ಹೇಳಿದ್ದರು.
 

ಜಾಕಿ ಶ್ರಾಫ್

ಜಾಕಿ ಶ್ರಾಫ್ ಅವರು ಮುಂಬೈ ಮತ್ತು ಪುಣೆ ನಡುವೆ ಇರುವ 44,000 ಚದರ ಅಡಿಗಳ ಫಾರ್ಮ್‌ಹೌಸ್‌ನಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ಇದಲ್ಲದೆ, ಅವರು ತೋಟಗಾರಿಕೆ ಮತ್ತು ಮನೆಯಲ್ಲಿ ಬೆಳೆದ ತರಕಾರಿಗಳ ಮೇಲಿನ ಪ್ರೀತಿಯ ಬಗ್ಗೆ ತಮ್ಮ Instagram ನಲ್ಲಿ ಆಗಾಗ್ಗೆ ವೀಡಿಯೊವನ್ನು ಪೋಸ್ಟ್ ಮಾಡುತ್ತಾರೆ.

ಜೂಹಿ ಚಾವ್ಲಾ

ಜೂಹಿ ಚಾವ್ಲಾ  ಕೃಷಿ ಮಾಡುವುದನ್ನು ಆನಂದಿಸುವುದು ಮಾತ್ರವಲ್ಲದೇ, ಸಾಂಕ್ರಾಮಿಕ ರೋಗವು ರೈತರನ್ನು ತೀವ್ರವಾಗಿ ಬಗ್ಗು ಬಡಿದಾಗ ಅವರ ಬೆಂಬಲಕ್ಕೆ ಬಂದರು. ಅವರು ತಮ್ಮ ಕುಟುಂಬದ ಕೃಷಿ ಭೂಮಿಯಲ್ಲಿ ಭೂರಹಿತ ರೈತರಿಗೆ ಋತುವಿನಲ್ಲಿ ಭತ್ತವನ್ನು ಬೆಳೆಯಲು ಅವಕಾಶ ನೀಡಿದ್ದರು ಎಂದು ವರದಿಯಾಗಿದೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಮನೆಯಲ್ಲಿ ಸಾವಯವ ತರಕಾರಿ ಬೆಳೆಯುವುದಷ್ಟೇ ಅಲ್ಲ, ಕೃತಕ ರಸಗೊಬ್ಬರಗಳಿಲ್ಲದೆ ಸಾವಯವ ತರಕಾರಿಗಳು ಮತ್ತು ಹಣ್ಣುಗಳನ್ನು ಹೇಗೆ ಬೆಳೆಯುವುದು ಎಂಬುದರ ಕುರಿತು ತಿಳಿಸಿಕೊಡಲು ಅವರು ಪ್ರತಿ ವಾರ ಗ್ರಾಮಾಂತರ ಪ್ರದೇಶಕ್ಕೂ ಕರೆದೊಯ್ಯುತ್ತಾರೆ. ಶಿಲ್ಪಾ ಶೆಟ್ಟಿ ಹಲವು ವರ್ಷಗಳ ಹಿಂದೆ ಸಾವಯವ ಕೃಷಿ ಆರಂಭಿಸಿದ್ದಾರೆ.

ಪ್ರೀತಿ ಝಿಂಟಾ

ಪ್ರೀತಿ ಝಿಂಟಾ ಆಗಾಗ್ಗೆ ತನ್ನ ಸಾವಯವ ಕೃಷಿಯ ಫೋಟೋ ಶೇರ್ ಮಾಡುತ್ತಿರುತ್ತಾರೆ. ನಟಿ ತಾಜಾ ಕ್ಯಾಪ್ಸಿಕಂ ಮತ್ತು ಟೊಮೆಟೊಗಳನ್ನು ಬೆಳೆಯುತ್ತಾರೆ. ಅವರು ತನ್ನ ತಾಯಿಯಿಂದ ಮನೆಯಲ್ಲಿ ತರಕಾರಿಗಳನ್ನು ಹೇಗೆ ಬೆಳೆಯಬೇಕೆಂದು ಕಲಿತಿದ್ದಾರೆ. ಇದಕ್ಕಾಗಿ ಆಕೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲಲ್ಲ ಎಂದಿದ್ದಾರೆ.

ಸಲ್ಮಾನ್‌ ಖಾನ್

ಸಲ್ಲು ತಮ್ಮ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ, ತಮಗೆ ಖುಷಿ ಹಾಗೂ ಸಂತೋಷವನ್ನು ಕೊಡುವ ಕೆಲಸ ಮಾಡುವುದನ್ನು ಅನೇಕರು ಕಂಡಿದ್ದಾರೆ. ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುವುದರಿಂದ, ಜಮೀನು ಉಳುಮೆ ಮಾಡುವುದು, ಟ್ರ್ಯಾಕ್ಟರ್ ಸವಾರಿ ಮತ್ತು ಬೆಳೆ ಕತ್ತರಿಸುವವರೆಗೆ, ಅವರು ಲಾಕ್‌ಡೌನ್ ಸಮಯದಲ್ಲಿ ಕೃಷಿಯನ್ನು ಮಾಡಿದ್ದರು. ಬಿಡುವು ಸಿಕ್ಕಾಗೆಲ್ಲಾ ಅವರು ತಮ್ಮ ಸಮಯವನ್ನು ಫಾರ್ಮ್‌ಹೌಸ್‌ನಲ್ಲಿ ಕಳೆಯುತ್ತಾರೆ. 

click me!