ಗ್ರಾಮಸ್ಥರ ತೀವ್ರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ಅಧಿಕಾರಿಗಳು, ಒಂದು ಬೋನನ್ನು ಅಳವಡಿಸಿ ತಮ್ಮ ಜವಾಬ್ದಾರಿಯನ್ನು ಮುಗಿಸಿಕೊಂಡರು. ಆದರೆ, ಒಂದು ತಿಂಗಳಾದರೂ ಹುಲಿಯನ್ನು ಸೆರೆ ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಇದು ಕೇವಲ ಜನರನ್ನು ಸಮಾಧಾನಪಡಿಸಲು ಇಲಾಖೆ ನಡೆಸಿದ 'ಕಣ್ಣೊರೆಸುವ ತಂತ್ರ' ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.