ಮುಸ್ಲಿಂ ಧರ್ಮದ ಬಾವುಟಕ್ಕೆ ಬೆಂಕಿ ಹಾಕಿದ್ದ ಮತ್ತು ಈದ್ ಮಿಲಾದ್ ಗೆ ಹಬ್ಬದ ಹಿನ್ನಲೆ ಹಾಕಿದ್ದ ಬಂಟಿಂಗ್ಸ್ ಕಿತ್ತೆಸೆದವರ ವಿರುದ್ದ ಒಂದು ಎಫ್ಐಆರ್ ಆಗಿದೆ. ಪ್ರತಿಭಟನಾ ಮೆರವಣಿಗೆ ವೇಳೆ ಮಸೀದಿಗೆ ನುಗ್ಗಲು ಯತ್ನಿಸಲಾಗಿದ್ದು, ಆ ವೇಳೆ ಕಲ್ಲು ತೂರಿದ ವಿಚಾರವಾಗಿ ಮತ್ತೊಂದು ಎಫ್ಐಆರ್ ಆಗಿದೆ. ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಗಿರೀಶ್, ಸೌಮ್ಯ, ರಮ್ಯ, ಪಲ್ಲವಿ ಸೇರಿದಂತೆ 500 ಜನರ ಮೇಲೆ BNS 189(2), 189(4), 121, 121(2), 190 ಅಡಿ ಎಫ್ಐಆರ್ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.