ಇಂತಹ ಸಂಕಷ್ಟದ ಸಂದರ್ಭದಲ್ಲಿ ವರುಣ ದೇವ ಕರುಣೆ ತೋರಿ ಮಳೆ ಸುರಿಸಲಿ, ಹಗರಿಬೊಮ್ಮನಹಳ್ಳಿ ತಾಲೂಕು ಬರದಿಂದ ಮುಕ್ತವಾಗಲಿ, ಮಾಲವಿ ಜಲಾಶಯ ಭರ್ತಿಯಾಗಿ ರೈತರ ಕೃಷಿಗೆ ವರದಾನವಾಗಲಿ ಎಂದು ಪ್ರಾರ್ಥಿಸಿ ತಾಲೂಕಿನ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.
ಗ್ರಾಮದ ಜನರು ಒಗ್ಗೂಡಿ ಭಜನೆ, ಪ್ರಾರ್ಥನೆ ನಡೆಸಿ ಉತ್ತಮ ಮಳೆಯಾಗುವಂತೆ ವರುಣ ದೇವನಲ್ಲಿ ಮೊರೆ ಇಟ್ಟಿದ್ದಾರೆ.