ಗಾಯಾಳು ಗಬ್ಬದ ಹಸುವಿಗೆ ಸೀಮಂತ

First Published Jan 6, 2021, 9:55 PM IST

ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ಅನಾಥ ಗಾಯಾಳು ಗಬ್ಬದ ಹಸು ಗೌರಿಗೆ ಬುಧವಾರ ಆಶ್ರಮ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಸೀಮಂತ ಶಾಸ್ತ್ರ ನಡೆಸಲಾಯಿತು.

ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ಅನಾಥ ಗಾಯಾಳು ಗಬ್ಬದ ಹಸು ಗೌರಿಗೆ ಬುಧವಾರ ಆಶ್ರಮ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಸೀಮಂತ ಶಾಸ್ತ್ರ ನಡೆಸಲಾಯಿತು.
undefined
ಅಪಘಾತವೊಂದರಲ್ಲಿ ಗಾಯಗೊಂಡು ನಡೆಯಲಾಗದ ಸ್ಥಿತಿಯಲ್ಲಿರುವ ದನದ ಮೈತೊಳೆದು ನಡಿಗೆ ಯಂತ್ರದ ಸಹಾಯದಿಂದ ಕರೆತಂದು ಹಸಿರು ಸೀರೆ, ರವಿಕೆ ಕಣ, ಅಕ್ಕಿ, ತೆಂಗಿನಕಾಯಿ ಮೊದಲಾದ ಸಾಮಗ್ರಿಗಳೊಂದಿಗೆ ಪೂಜಿಸಲಾಯಿತು.
undefined
ಮೊಳಕೆ ಬರಿಸಿದ ನವಧಾನ್ಯಗಳು, ವಿವಿಧ ಹಿಂಡಿಗಳು, ಹಾಗೂ ಸಿಹಿ ಖಾದ್ಯಗಳನ್ನು ತಿನ್ನಿಸಲಾಯಿತು. ಮುತೈದರು ಆರತಿ ಬೆಳಗಿದರು.
undefined
ವಿಚಿತ್ರ ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ. ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು, ಹೊಸಬೆಳಕು ಆಶ್ರಮದ ಸಂಚಾಲಕರಾದ ತನುಲಾ ತರುಣ್, ವಿನಯಚಂದ್ರ ಆಚಾರ್ಯ, ಆಟೋ ಚಾಲಕರು ಉಪಸ್ಥಿತರಿದ್ದರು.
undefined
click me!