ದೋರನಾಳು ಗ್ರಾಮದ ನವೀನ್ ಗೆ ಹೊಸದುರ್ಗದ ಸಿಂಧು ಜೊತೆ ಮದುವೆ ನಿಶ್ಚಯವಾಗಿತ್ತು.ಆದರೆ ಇನ್ನೊಂದು ಕಡೆ ನವೀನ್ ಪ್ರೀತಿಸಿದ ಯುವತಿಯಿಂದ ಮದುವೆ ನಿಲ್ಲಿಸುವ ಬೆದರಿಕೆ ಹಾಕಿದ್ದಳು.
undefined
ಇದೆಲ್ಲದರ ಪರಿಣಾಮ ಎಂಬಂತೆ ಛತ್ರದಿಂದಲೇ ವರ ನವೀನ್ ನಾಪತ್ತೆಯಾದ.ಮಧುಮಗಳಾಗಿದ್ದ ಸಿಂಧು ಅವರನ್ನು ಬಿಎಂಟಿಸಿ ಕಂಡಕ್ಟರ್ ಚಂದ್ರು ಮದುವೆಯಾದರು. ಚಂದ್ರು ತರೀಕೆರೆ ತಾಲೂಕಿನ ನಂದಿ ಗ್ರಾಮದ ಯುವಕ.
undefined
ಹಸೆಮಣೆ ಏರಬೇಕಿದ್ದ ಯುವತಿಗೆ ಮದುವೆ ನಿಲ್ಲುವ ಆತಂಕ ಎದುರಾಗಿತ್ತು. ಆದರೆ, ಮದುವೆ ನಿಲ್ಲದೆ ಛತ್ರದಲ್ಲೇ ಮತ್ತೋರ್ವ ಯುವಕ ಚಂದ್ರು ನಾನೇ ಮದುವೆಯಾಗುತ್ತೇನೆಂದು ವಿವಾಹವಾಗಿದ್ದು ಎಲ್ಲವೂ ಸುಖಾಂತ್ಯವಾಗಿದೆ.
undefined
ಯುವಕ ಚಂದ್ರು ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.x
undefined