ಹೊಟ್ಟೆನೋವು ತಾಳಲಾರದೇ ಮರಳಿ ಬಾರದೂರಿಗೆ ಪಯಣ: ಜೀವಕ್ಕೆ ಅಂತ್ಯವಾಡಿದ 19ರ ತರುಣಿ ಕೀರ್ತನಾ!

Published : Jan 12, 2026, 11:01 AM IST

ತುಮಕೂರು ಜಿಲ್ಲೆಯ ಬ್ಯಾತ ಗ್ರಾಮದಲ್ಲಿ, ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ 19 ವರ್ಷದ ಕೀರ್ತನಾ ಎಂಬ ಯುವತಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಕೆಲಸ ಹುಡುಕಿಕೊಂಡು ಚಿಕ್ಕಪ್ಪನ ಮನೆಗೆ ಬಂದಿದ್ದ ಈಕೆ, ನೋವು ಸಹಿಸಲಾಗದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.

PREV
15
ನೋವಿಗಾಗಿ ಜೀವಕ್ಕೆ ಅಂತ್ಯವಾಡಿದ ಕೀರ್ತನಾ

ತುಮಕೂರು (ಜ.12): ಜಿಲ್ಲೆಯ ಊರ್ಡಿಗೆರೆ ಹೋಬಳಿಯ ಬ್ಯಾತ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ದೀರ್ಘಕಾಲದ ಹೊಟ್ಟೆನೋವಿನ ಬಾಧೆಯಿಂದ ಬೇಸತ್ತ 19 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.

25
ಘಟನೆಯ ವಿವರ

ಮೃತ ಯುವತಿಯನ್ನು ಕಲಬುರಗಿ ಜಿಲ್ಲೆಯ ಕಲಗಿ ತಾಲೂಕಿನ ಸಾಲಹಳ್ಳಿ ನಿವಾಸಿ ಕೀರ್ತನಾ (19) ಎಂದು ಗುರುತಿಸಲಾಗಿದೆ. ಈಕೆ ಕಳೆದ ಎರಡು ತಿಂಗಳ ಹಿಂದಷ್ಟೇ ಕೆಲಸ ಹುಡುಕುವ ಸಲುವಾಗಿ ತುಮಕೂರು ತಾಲೂಕಿನ ಬ್ಯಾತ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದಳು. ನಗರ ಪ್ರದೇಶದಲ್ಲಿ ಯಾವುದಾದರೂ ಉತ್ತಮ ಕೆಲಸ ಸಿಗಬಹುದು ಎಂಬ ಆಸೆಯೊಂದಿಗೆ ಬಂದಿದ್ದ ಕೀರ್ತನಾಗೆ ಇದುವರೆಗೆ ಸೂಕ್ತ ಉದ್ಯೋಗ ಲಭಿಸಿರಲಿಲ್ಲ. ಹೀಗಾಗಿ ಚಿಕ್ಕಪ್ಪನ ಮನೆಯಲ್ಲೇ ಉಳಿದುಕೊಂಡಿದ್ದಳು.

35
ನೋವು ತಂದ ಸಾವು

ಪೋಷಕರು ನೀಡಿರುವ ಮಾಹಿತಿಯ ಪ್ರಕಾರ, ಕೀರ್ತನಾ ಕಳೆದ ಕೆಲವು ಸಮಯದಿಂದ ತೀವ್ರವಾದ ಋತುಕಾಲದ (ಪಿರಿಯಡ್ಸ್‌) ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಘಟನೆ ನಡೆದ ದಿನ ಚಿಕ್ಕಪ್ಪನ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿದ ಕೀರ್ತನಾ, ತೀವ್ರವಾದ ಹೊಟ್ಟೆನೋವಿನ ವೇದನೆಯನ್ನು ತಾಳಲಾರದೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.

45
ಕುಟುಂಬಸ್ಥರ ಆಕ್ರಂದನ

ಮನೆಯವರು ಹಿಂತಿರುಗಿ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಯುವತಿಯ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬದುಕಬೇಕಿದ್ದ ಮಗಳು ನೋವಿಗೆ ಹೆದರಿ ಹೀಗೆ ಅಕಾಲಿಕ ಮರಣವನ್ನಪ್ಪಿದ್ದು ಗ್ರಾಮಸ್ಥರಲ್ಲೂ ವಿಷಾದ ಮೂಡಿಸಿದೆ.

55
ಪೊಲೀಸ್ ತನಿಖೆ

ಈ ವಿಷಯ ತಿಳಿಯುತ್ತಿದ್ದಂತೆಯೇ ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಕೆಲಸ ಹುಡುಕಿ ಜೀವನ ಕಟ್ಟಿಕೊಳ್ಳಬೇಕಿದ್ದ ಯುವತಿ, ನೋವಿನ ಕಾರಣಕ್ಕೆ ಬಾರದ ಲೋಕಕ್ಕೆ ಪಯಣಿಸಿರುವುದು ದುರಂತವೇ ಸರಿ.

Read more Photos on
click me!

Recommended Stories