ಸೈಕಲ್ ತುಳಿದಿದ್ದೇ ದೊಡ್ಡ ಪ್ರಮಾದವಾಗಿದ್ದು ಏಕೆ?
ಈ ಘಟನೆಯನ್ನು ವಿಶ್ಲೇಷಿಸಿರುವ ಉರಗ ತಜ್ಞ ಗೌರಿ ಕಾಳಿಂಗ, 'ವ್ಯಕ್ತಿ ಆದಷ್ಟು ಬೇಗ ಆಸ್ಪತ್ರೆ ತಲುಪಲು ಯತ್ನಿಸಿದ್ದು ಒಳ್ಳೆಯದೇ. ಆದರೆ, ಆತ ಸೈಕಲ್ ತುಳಿದುಕೊಂಡು ಹೋದದ್ದು ಆತನ ಜೀವಕ್ಕೇ ಕಂಟಕ ತಂದಿಟ್ಟಿದೆ. ಸೈಕಲ್ ತುಳಿಯುವಾಗ ಅಥವಾ ವೇಗವಾಗಿ ಓಡಿದಾಗ ನಮ್ಮ ಹೃದಯ ಬಡಿತ ಹಾಗೂ ರಕ್ತಪರಿಚಲನೆ ತೀವ್ರವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ ಹಾವಿನ ವಿಷವು ಅತಿ ವೇಗವಾಗಿ ಇಡೀ ದೇಹಕ್ಕೆ ಮತ್ತು ಪ್ರಮುಖ ಅಂಗಾಂಗಗಳಿಗೆ ಆವರಿಸುತ್ತದೆ. ಪರಿಣಾಮವಾಗಿ ಆ ವ್ಯಕ್ತಿ ಈಗ ಅತ್ಯಂತ ಗಂಭೀರ (ಕ್ರಿಟಿಕಲ್) ಸ್ಥಿತಿಗೆ ತಲುಪಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.
ಹಾವು ಕಚ್ಚಿದಾಗ ಏನು ಮಾಡಬೇಕು?:
ಹಾವು ಕಚ್ಚಿದ ತಕ್ಷಣ ಗಾಬರಿಯಾಗಬಾರದು. ಯಾವುದೇ ಕಾರಣಕ್ಕೂ ಓಡುವುದು, ಸೈಕಲ್ ತುಳಿಯುವುದು ಅಥವಾ ಅತಿಯಾದ ದೈಹಿಕ ಶ್ರಮ ಮಾಡಬಾರದು. ಕಡಿತಕ್ಕೊಳಗಾದ ಅಂಗವನ್ನು ಅಲುಗಾಡಿಸದೆ ಶಾಂತರಾಗಿರಬೇಕು. ಬೈಕ್, ಆಟೋ ಅಥವಾ ಕಾರಿನಂತಹ ವಾಹನದಲ್ಲಿ ಕುಳಿತು ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾಗಿ ಆ್ಯಂಟಿ-ವೆನಮ್ (Anti-venom) ಚಿಕಿತ್ಸೆ ಪಡೆಯಬೇಕು.