ನನ್ನ ಮಗ ಸತ್ತ ಮೇಲು ಸಮಾಧಿಯನ್ನು ಬಿಡಲಿಲ್ಲ ಹಾಳು ಮಾಡಿದ್ದಾರೆ. ನಮ್ಮ ಮೇಲೆ ದ್ವೇಷವಿದ್ದರೆ ನಮಗೆ ಏನಾದರೂ ಮಾಡಿಬಿಡಿ. ನಮ್ಮ ಮನೆಯಲ್ಲಿ ಈ ಘಟನೆ ಸಂಭವಿಸಿದ ಬೆನ್ನಲ್ಲೇ ಯಾರೂ ಸರಿಯಾಗಿ ಊಟ ಕೂಡ ಮಾಡುತ್ತಿಲ್ಲ . ಬುಧುವಾರ ಹೂವಿನ ಹಾರ ಎಲ್ಲ ತೆಗೆದುಕೊಂಡು ಸಮಾಧಿಗೆ ಪೂಜೆ ಮಾಡಬೇಕು ಎಂದು ಕೊಂಡಿದ್ದೇವು. ಬಾಲಕನ ಫೋಟೋ ಇದ್ದ ಸಮಾಧಿಯ ಒಂದು ಭಾಗವನ್ನು ಒಡೆದು ಹಾಕಿದ್ದು, ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಸಂಕೇತ್ ತಂದೆ ಕುಮಾರ್ ಹೇಳಿದ್ದಾರೆ.