ಇಂದಿನ ವಿನಯ್ ಕುಲಕರ್ಣಿ ಪ್ರವಾಸದ ವೇಳಾಪಟ್ಟಿ:
ತಮ್ಮ ತವರು ಜಿಲ್ಲೆಗೆ ಕಾಲಿಟ್ಟಿರುವ ವಿನಯ್ ಕುಲಕರ್ಣಿ ಬೆಳ್ಳಂಬೆಳಗ್ಗೆಯೇ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಮುಂದಾಗಿದ್ದಾರೆ.
ಬೆಳಿಗ್ಗೆ 7:30: ಪ್ರಸಿದ್ಧ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ.
ಬೆಳಿಗ್ಗೆ 8:30: ಧಾರವಾಡದ ಮುರುಘಾಮಠಕ್ಕೆ ಭೇಟಿ, ಪೂಜ್ಯ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ.
ಬೆಳಿಗ್ಗೆ 11:00: ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ಗದ್ದುಗೆ ದರ್ಶನ ಪಡೆಯಲಿದ್ದಾರೆ.
ಮಠ-ಮಂದಿರಗಳ ದರ್ಶನದ ಬಳಿಕವಷ್ಟೇ ಅವರು ತಮ್ಮ ನಿವಾಸಕ್ಕೆ ತೆರಳಲಿದ್ದು, ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.