ನ್ಯಾಯಾಂಗ ತನಿಖೆಯ ಬೇಡಿಕೆ ಬಗ್ಗೆ ಉತ್ತರಿಸುತ್ತಾ, 'ನಮ್ಮವರೇ ತನಿಖೆ ಮಾಡುವಾಗ ಬೇರೆ ತನಿಖೆ ಯಾಕೆ? ತನಿಖಾ ವರದಿ ಬರಲಿ ನೋಡೋಣ' ಎಂದರು. ಇನ್ನು ಬಹುನಿರೀಕ್ಷಿತ ಸಂಪುಟ ವಿಸ್ತರಣೆಯ ಕುರಿತು ಕೇಳಿದ ಪ್ರಶ್ನೆಗೆ, 'ಸಂಕ್ರಾಂತಿ ಬಳಿಕ ಏನಾಗುತ್ತೋ ಕಾದು ನೋಡೋಣ, ನನಗೇನೂ ಗೊತ್ತಿಲ್ಲ' ಎಂದು ಮಾರ್ಮಿಕವಾಗಿ ಉತ್ತರಿಸಿದರು.