ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಈ ಬಾರಿ ಚಿನ್ನ ಬೆಳ್ಳಿ ಕಾಣಿಕೆ ಇಳಿಮುಖವಾಗಿದೆ.
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಬೆಲೆ ಹೆಚ್ಚಳದ ಪರಿಣಾಮದಿಂದ ಚಿನ್ನ ಬೆಳ್ಳಿಯ ಕಾಣಿಕೆ ಮಾತ್ರ ಇಳಿಮುಖವಾಗಿದೆ.
24
ರಾಯರ ಹುಂಡಿಗೆ ಕೋಟಿ ಕೋಟಿ ಹಣ
ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಿಂದ ಭಕ್ತರು ರಾಯರ ದರ್ಶನಕ್ಕೆ ಬರುತ್ತಾರೆ. ದರ್ಶನ ಪಡೆದ ಭಕ್ತರು ಕಾಣಿಕೆ ಸಲ್ಲಿಸದೆ ಹೋಗುವುದಿಲ್ಲ. ಈ ಬಾರಿ ಮೇ-ಜೂನ್ ತಿಂಗಳಲ್ಲಿ ಅಂದರೆ ಕೇವಲ 22 ದಿನಗಳಲ್ಲಿ ದಾಖಲೆಯ ಹಣ ಸಂಗ್ರವಾಗಿದೆ.
34
ಹಣದ ಜೊತೆಗೆ ರಾಯರಿಗೆ ಚಿನ್ನ-ಬೆಳ್ಳಿ ಅರ್ಪಣೆ
ಮಂತ್ರಾಲಯದ ರಾಯರ ದರ್ಶನಕ್ಕೆ ಬರುವವರು ದರ್ಶನ ಬಳಿಕ ಹುಂಡಿಗೆ ಕೇವಲ ನಗದು ಮಾತ್ರವಲ್ಲದೆ ಕೆಲವು ಭಕ್ತರು ಚಿನ್ನ, ಬೆಳ್ಳಿ ಆಭರಣಗಳನ್ನೂ ರಾಯರಿಗೆ ಸಮರ್ಪಿಸಿದ್ದಾರೆ. ಈ ಬಾರಿ ಹುಂಡಿಯಲ್ಲಿ 46 ಗ್ರಾಂ ಚಿನ್ನ ಹಾಗೂ 750 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿದೆ. ಹುಂಡಿ ಎಣಿಕೆ ವೇಳೆ ಈ ಆಭರಣಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ ಎಂದು ಮಂತ್ರಾಲಯ ಮಠದ ಮೂಲಗಳು ತಿಳಿಸಿವೆ.
ಕಳೆದ ಆರು ತಿಂಗಳ ಅಂಕಿ-ಅಂಶಗಳ ಲೆಕ್ಕ ಹಾಕಿ ನೋಡಿದರೆ ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳಲ್ಲಿ ಸ್ವಲ್ಪ ಇಳಿಮುಖವಾಗಿದೆ. ಜನವರಿಯಲ್ಲಿ 28 ಗ್ರಾಂ ಚಿನ್ನ, 1278 ಗ್ರಾಂ ಬೆಳ್ಳಿ ಸಂಗ್ರವಾಗಿತ್ತು.ಫೆಬ್ರವರಿಯಲ್ಲಿ 28 ಗ್ರಾಂ ಚಿನ್ನ ಹಾಗೂ 1000 ಗ್ರಾಂ ಬೆಳ್ಳಿ ಸಂಗ್ರಹ. ಮಾರ್ಚ್ನಲ್ಲಿ 14 ಗ್ರಾಂ ಚಿನ್ನ ಮತ್ತು 2163 ಗ್ರಾಂ ಬೆಳ್ಳಿ, ಏಪ್ರಿಲ್ನಲ್ಲಿ 47 ಗ್ರಾಂ ಚಿನ್ನ ಹಾಗೂ 592 ಗ್ರಾಂ ಬೆಳ್ಳಿ ಕಾಣಿಕೆ ನೀಡಿದ್ದ ಭಕ್ತರು. ಮೇ ತಿಂಗಳಲ್ಲಿ 15 ಗ್ರಾಂ ಚಿನ್ನ ಮತ್ತು 751 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ.
ಈ ಬಾರಿ 46 ಗ್ರಾಂ ಚಿನ್ನ ಮತ್ತು 750 ಗ್ರಾಂ ಬೆಳ್ಳಿ ಕಾಣಿಕೆ ನೀಡಿರುವ ಭಕ್ತರು. ಒಟ್ಟಾರೆ ದೇಶಾದ್ಯಂತ ಚಿನ್ನ ಬೆಳ್ಳಿ ಬೆಲೆಗಳು ಗಗನಕ್ಕೇರಿರುವ ಹಿನ್ನೆಲೆ ಭಕ್ತರು ಆಭರಣ ರೂಪದಲ್ಲಿ ಹಿಂದಿನಷ್ಟು ಕಾಣಿಕೆ ನಿಡುತ್ತಿಲ್ಲ ಎಂಬು ತಿಳಿದುಬಂದಿದೆ. ಆದರೆ ನಗದು ಕಾಣಿಕೆಯಲ್ಲಿ ಮಾತ್ರ ಯಾವುದೇ ಕುಸಿತ ಕಂಡಿಲ್ಲ. ಪ್ರತಿ ಬಾರಿಯೂ ಕಾಣಿಕೆ ಸಂಗ್ರಹ ಹೆಚ್ಚುತ್ತಿದೆ ಎಂದ ಮಂತ್ರಾಲಯ ಮಠವೇ ಈ ಮಾಹಿತಿಯನ್ನು ಪ್ರಕಟಿಸಿದೆ.