ಕಂಪೌಂಡ್ ಒಡೆದು ಒಳಗೆ ನುಗ್ಗಿದ ರೈತರು:
ರ್ಯಾಲಿಯು ತಾಲೂಕಿನ ಬಸಾಪುರ (Basapura) ಬಳಿ ಇರುವ ಕಾರ್ಖಾನೆಯ ಬಳಿ ತಲುಪುತ್ತಿದ್ದಂತೆ ರೈತರ ಆಕ್ರೋಶ ಮುಗಿಲು ಮುಟ್ಟಿತು. 'ಬಲ್ಡೋಟಾ ಹಠಾವೋ, ಕೊಪ್ಪಳ ಬಚಾವೋ' (Baldota Hathao, Koppal Bachao) ಎಂದು ಘೋಷಣೆ ಕೂಗುತ್ತಾ ಬಂದ ರೈತರು, ಪೊಲೀಸರ ತಡೆಯನ್ನೂ ಲೆಕ್ಕಿಸದೆ ಕಾರ್ಖಾನೆಯ ಕಂಪೌಂಡ್ ಒಡೆದು ಹಾಕಿದರು. ಅಷ್ಟಕ್ಕೇ ನಿಲ್ಲದ ರೈತರು, ಕಾರ್ಖಾನೆ ಆವರಣದಲ್ಲಿರುವ ಕೆರೆಗೆ (Factory Lake) ನುಗ್ಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.