ಇದರಿಂದ ಕೋಪಗೊಂಡ ದತ್ತು ಫೋನ್ ಮಾಡಿ ಶರಣು ಜೊತೆ ಜಗಳ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಶರಣು, ಗೆಳೆಯ ದತ್ತುಗೆ ಮಾತ್ರವಲ್ಲದೇ ಆತನ ಪತ್ನಿ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾನೆ. ಇದೇ ಕೋಪದಲ್ಲಿ ಮನೆಯಲ್ಲಿದ್ದ ಚಾಕು ಜೊತೆ ಶರಣು ಮದ್ಯ ಕುಡಿಯುತ್ತಿದ್ದ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಬಳಿಯಲ್ಲಿರುವ ನರ್ತಕಿ ಬಾರ್ಗೆ ಬಂದಿದ್ದಾನೆ.