9ನೇ ದಿನದ ಉತ್ಖನನದಲ್ಲಿ, ಸಾಮಾನ್ಯ ಮನೆಗಳ ಗೋಡೆಗಳು ಮತ್ತು ಬಾವಿ ಕಟ್ಟೆಗಳಲ್ಲಿ 12ನೇ ಶತಮಾನದ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ಅಪರೂಪದ ಶಿಲಾಕೃತಿಗಳು ಪತ್ತೆಯಾಗಿವೆ. ದಾನ ಶಿಲೆ, ದ್ವಾರಪಾಲಕ ಶಿಲೆ ಸೇರಿದಂತೆ ಈ ಆವಿಷ್ಕಾರಗಳು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿವೆ.
ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯವು 9ನೇ ದಿನ ಪೂರೈಸಿದ್ದು, ನಿತ್ಯ ಇಲ್ಲಿನ ಮಣ್ಣಿನಿಂದ ಹೊಸ ಇತಿಹಾಸದ ಕುರುಹುಗಳು ಆಚೆ ಬರುತ್ತಿವೆ. ಮತ್ತೊಂದೆಡೆ ಗ್ರಾಮದ ಸಾಮಾನ್ಯ ಮನೆಗಳ ಗೋಡೆಗಳಲ್ಲೂ ಅದ್ಭುತ ಶಿಲಾಕೃತಿಗಳು ಪತ್ತೆಯಾಗಿವೆ.
26
12ನೇ ಶತಮಾನದ ಕೃತಿಗಳು
ಲಕ್ಕುಂಡಿಯ ಇತಿಹಾಸ ಕೇವಲ ದೇವಸ್ಥಾನಗಳಿಗೆ ಸೀಮಿತವಾಗಿಲ್ಲ ಎನ್ನುವುದಕ್ಕೆ ಶನಿವಾರ ಬಳಗಾನೂರು ಎನ್ನುವವರ ಕುಟುಂಬದ ತೋಟದ ಮನೆಯ ಗೋಡೆಯಲ್ಲಿ ದೊರೆತ 12ನೇ ಶತಮಾನದ ಕೃತಿಗಳು ಹಾಗೂ ರವದಿ ಕುಟುಂಬದ ಜಮೀನಿನ ಬಾವಿಯ ಕಟ್ಟೆಯಲ್ಲಿ ಸಿಕ್ಕ ಕಲ್ಯಾಣ ಚಾಲುಕ್ಯರ ಕಾಲದ ಕೆತ್ತನೆಗಳೇ ಸಾಕ್ಷಿಯಾಗಿ
36
ದಾನ ಶಿಲೆ, ದ್ವಾರಪಾಲಕನ ಶಿಲೆ ಹಾಗೂ ಬೋದಿಗೆ ಶಿಲೆ
ಗೋಡೆಯ ಸಿಮೆಂಟ್ ಪ್ಲಾಸ್ಟರ್ ತೆರವು ಮಾಡಿದಾಗ ದಾನ ಶಿಲೆ, ದ್ವಾರಪಾಲಕನ ಶಿಲೆ ಹಾಗೂ ಬೋದಿಗೆ ಶಿಲೆಗಳು ಕಂಡಬಂದಿವೆ. ಬಾವಿಯ ಕಟ್ಟೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ದೇವಸ್ಥಾನದ ಬಾಗಿಲಿಗೆ ಬಳಸುವ ಕಂಬದ ಮಾದರಿಯ ಶಿಲೆ ಪತ್ತೆಯಾಗಿದ್ದು, ನಾಟ್ಯ ಭಂಗಿಯಲ್ಲಿರುವ ಸುಂದರ ಕಲಾಕೃತಿ ಕಂಡುಬಂದಿದೆ. ಅಲ್ಲದೇ ವಿಜಯನಗರ ಕಾಲದ ನಾಗಮಣಿ ನಾಗಶಿಲೆಯೂ ರವದಿ ಕುಟುಂಬದ ಜಮೀನಿನಲ್ಲಿ ಪತ್ತೆಯಾಗಿದ್ದು, ಪ್ರಸ್ತುತ ಕುಟುಂಬದವರಿಂದ ಪೂಜೆಗೊಳ್ಳುತ್ತಿದೆ.
ಪೂರ್ವಜರು ಇವುಗಳನ್ನು ಬಳಸಿಕೊಂಡು ಗೋಡೆ ನಿರ್ಮಿಸಿದ್ದರು. ನಮಗೆ ಇದರ ಮಹತ್ವ ತಿಳಿದಿರಲಿಲ್ಲ. ಸರ್ಕಾರ ಕೇಳಿದರೆ ಈ ಶಿಲಾಕೃತಿಗಳನ್ನು ಹಸ್ತಾಂತರಿಸಲು ಸಿದ್ಧ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ಶಿಲೆಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
56
ತಜ್ಞರ ವಿಶ್ಲೇಷಣೆ:
ಹಲವಾರು ಶಾಸನ ತಜ್ಞರು ಕೆಲವು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದು, ಲಕ್ಕುಂಡಿ 9ನೇ ಶತಮಾನದಿಂದಲೇ ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಯಾದವರು, ಹೊಯ್ಸಳರು ಮತ್ತು ವಿಜಯನಗರದ ಅರಸರು ಇದನ್ನು ಆಳಿದ್ದಾರೆ.
ದಾನ ಚಿಂತಾಮಣಿ ಅತ್ತಿಮಬ್ಬೆಯ ಅರಮನೆ ಇಲ್ಲೇ ಇತ್ತು ಎಂದು ಶಾಸನಗಳು ಹೇಳುತ್ತವೆ. ಆಕೆ 1001 ಜಿನ ದೇವಾಲಯಗಳನ್ನು ಕಟ್ಟಿಸಿದ್ದಳು ಎಂಬ ಹೆಗ್ಗಳಿಕೆ ಈ ನಾಡಿಗಿದೆ. ಆದರೆ, ಜನಸಾಮಾನ್ಯರಲ್ಲಿರುವ ನಿಧಿಯ ನಂಬಿಕೆಯನ್ನು ಅವರು ತಳ್ಳಿಹಾಕಿದ್ದು, ಶಾಸನಗಳಲ್ಲಿ ನಿಧಿಯ ಉಲ್ಲೇಖವಿಲ್ಲ. ಬದಲಾಗಿ ಅಂದಿನ ಟಂಕಶಾಲೆಯಲ್ಲಿ ನಾಣ್ಯಗಳು ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ