ಯಾದಗಿರಿ ಜಿಲ್ಲಾದ್ಯಂತ ವರುಣನ ಅಬ್ಬರ: ಹೊಲ, ಗದ್ದೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

Suvarna News   | Asianet News
Published : Sep 26, 2020, 01:42 PM ISTUpdated : Sep 26, 2020, 01:45 PM IST

ಯಾದಗಿರಿ(ಸೆ.26): ನಗರ ಸೇರಿದಂತೆ ಜಿಲ್ಲೆಯ ಶಹಪೂರ, ವಡಗೇರಾ, ಗುರುಮಠಕಲ್ ಸುರಪುರ, ಹುಣಸಗಿ  ತಾಲೂಕುಗಳಲ್ಲಿ ಭೀಕರ ಮಳೆಯಾಗುತ್ತಿದೆ. ಇಂದು(ಶನಿವಾರ) ಬೆಳಗ್ಗೆಯಿಂದಲೂ ಸಹ ಹಲವೆಡೆ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದ ಜಿಲ್ಲಾದ್ಯಂತ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. 

PREV
111
ಯಾದಗಿರಿ ಜಿಲ್ಲಾದ್ಯಂತ ವರುಣನ ಅಬ್ಬರ: ಹೊಲ, ಗದ್ದೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

ಯಾದಗಿರಿ ಹೋಬಳಿಯಲ್ಲಿ 64.55 ಮಿ.ಮಿ, ಶಹಾಪುರ 124.5 ಮಿ.ಮಿ, ಸುರಪುರ 64.55 ಮಿ.ಮಿ, ವಡಗೇರಾ 69.5 ಮಿ.ಮಿ ಹಾಗೂ ಗುರುಮಠಕಲ್ ಹೋಬಳಿಯಲ್ಲಿ 65 ಮಿ.ಮಿ ಮಳೆ ಆಗಿದೆ.

ಯಾದಗಿರಿ ಹೋಬಳಿಯಲ್ಲಿ 64.55 ಮಿ.ಮಿ, ಶಹಾಪುರ 124.5 ಮಿ.ಮಿ, ಸುರಪುರ 64.55 ಮಿ.ಮಿ, ವಡಗೇರಾ 69.5 ಮಿ.ಮಿ ಹಾಗೂ ಗುರುಮಠಕಲ್ ಹೋಬಳಿಯಲ್ಲಿ 65 ಮಿ.ಮಿ ಮಳೆ ಆಗಿದೆ.

211

ಭಾರೀ ಮಳೆಯಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ

ಭಾರೀ ಮಳೆಯಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ

311

ಅನೇಕ ಕಡೆಗಳಲ್ಲಿ ಮನೆಗಳು ಕುಸಿದಿವೆ, ಯರಗೋಳ ಗ್ರಾಮದ ದೊಡ್ಡಕೆರೆ ತುಂಬಿ ಕೋಡಿ ಹರಿದಿದೆ, ಹತ್ತು ವರ್ಷಗಳ ಹಿಂದೆ ಈ ರೀತಿ ಕೆರೆ ತುಂಬಿ ಕೋಡಿ ಹರಿದಿತ್ತು.

ಅನೇಕ ಕಡೆಗಳಲ್ಲಿ ಮನೆಗಳು ಕುಸಿದಿವೆ, ಯರಗೋಳ ಗ್ರಾಮದ ದೊಡ್ಡಕೆರೆ ತುಂಬಿ ಕೋಡಿ ಹರಿದಿದೆ, ಹತ್ತು ವರ್ಷಗಳ ಹಿಂದೆ ಈ ರೀತಿ ಕೆರೆ ತುಂಬಿ ಕೋಡಿ ಹರಿದಿತ್ತು.

411

ಶಹಾಪೂರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿದೆ

ಶಹಾಪೂರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿದೆ

511

ಸುರಪುರ ತಾಲೂಕಿನ ನಗನೂರು, ದೇವಿಕೇರಿ, ಬೈರೆಮಡ್ಡಿ, ವಡಗೇರಾ ತಾಲೂಕಿನ ಬೀರನೂರು, ಬೊಮ್ಮನಹಳ್ಳಿ ಮುಂತಾದ ಹೊಲ-ಗದ್ದೆಗಳಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. 

ಸುರಪುರ ತಾಲೂಕಿನ ನಗನೂರು, ದೇವಿಕೇರಿ, ಬೈರೆಮಡ್ಡಿ, ವಡಗೇರಾ ತಾಲೂಕಿನ ಬೀರನೂರು, ಬೊಮ್ಮನಹಳ್ಳಿ ಮುಂತಾದ ಹೊಲ-ಗದ್ದೆಗಳಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. 

611

ವರುಣನ ಅಬ್ಬರದಿಂದ ಭತ್ತ, ಹತ್ತಿ, ತೊಗರಿ, ಶೇಂಗಾ, ಮೆಣಸಿನಕಾಯಿ ಮುಂತಾದ ಬೆಳೆಗಳು ನೀರುಪಾಲು 

ವರುಣನ ಅಬ್ಬರದಿಂದ ಭತ್ತ, ಹತ್ತಿ, ತೊಗರಿ, ಶೇಂಗಾ, ಮೆಣಸಿನಕಾಯಿ ಮುಂತಾದ ಬೆಳೆಗಳು ನೀರುಪಾಲು 

711

ನಗನೂರು ಗ್ರಾಮದಲ್ಲಿ ಮನೆಗೆ ನೀರು ನುಗ್ಗಿದೆ, ದೇವಿ ಕೇರಿಯಲ್ಲಿ ಪ್ರೌಢಶಾಲೆ ಮೈದಾನ ಜಲಾವೃತಗೊಂಡಿದೆ.

ನಗನೂರು ಗ್ರಾಮದಲ್ಲಿ ಮನೆಗೆ ನೀರು ನುಗ್ಗಿದೆ, ದೇವಿ ಕೇರಿಯಲ್ಲಿ ಪ್ರೌಢಶಾಲೆ ಮೈದಾನ ಜಲಾವೃತಗೊಂಡಿದೆ.

811

ಸೈದಾಪುರ ಸಮೀಪದ ಬೆಳಗುಂದಿ ರಸ್ತೆ ಬಂದ್ ಆಗಿದೆ, ಗುರುಮಠಕಲ್ ತಾಲೂಕಿನ ಗುಂಜನೂರು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. 

ಸೈದಾಪುರ ಸಮೀಪದ ಬೆಳಗುಂದಿ ರಸ್ತೆ ಬಂದ್ ಆಗಿದೆ, ಗುರುಮಠಕಲ್ ತಾಲೂಕಿನ ಗುಂಜನೂರು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. 

911

ಯಾದಗಿರಿ ನಗರದ ಲುಂಬಿನಿ ಪಾರ್ಕ್‌ನಲ್ಲಿ ನೀರು ನುಗ್ಗಿದ್ದರಿಂದ ಕುಸಿದು ಬಿದ್ದ ಪಾದಚಾರಿ ಮಾರ್ಗ 

ಯಾದಗಿರಿ ನಗರದ ಲುಂಬಿನಿ ಪಾರ್ಕ್‌ನಲ್ಲಿ ನೀರು ನುಗ್ಗಿದ್ದರಿಂದ ಕುಸಿದು ಬಿದ್ದ ಪಾದಚಾರಿ ಮಾರ್ಗ 

1011

ಶಹಾಪುರ ತಾಲೂಕಿನ ತಿಪ್ಪನಹಳ್ಳಿ ಸೇತುವೆ ಮುಳುಗಿ ಹೋಗಿದೆ, ಗಂಗನಾಳ ಕೊಲ್ಲೂರು ಗ್ರಾಮಗಳಲ್ಲಿ ನೂರಾರು ಎಕರೆ ಜಮೀನು ಜಲಾವೃತಗೊಂಡಿವೆ, ಇಲ್ಲಿ ಬೆಳೆಯಲಾಗಿದ್ದ ಹತ್ತಿ, ಮೆಣಸಿನಕಾಯಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. 

ಶಹಾಪುರ ತಾಲೂಕಿನ ತಿಪ್ಪನಹಳ್ಳಿ ಸೇತುವೆ ಮುಳುಗಿ ಹೋಗಿದೆ, ಗಂಗನಾಳ ಕೊಲ್ಲೂರು ಗ್ರಾಮಗಳಲ್ಲಿ ನೂರಾರು ಎಕರೆ ಜಮೀನು ಜಲಾವೃತಗೊಂಡಿವೆ, ಇಲ್ಲಿ ಬೆಳೆಯಲಾಗಿದ್ದ ಹತ್ತಿ, ಮೆಣಸಿನಕಾಯಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. 

1111

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ಪಾತ್ರದಲ್ಲಿ ಭಾರಿ ಮಳೆಯಿಂದಾಗಿ ಇಂದು ಮಧ್ಯಾಹ್ನ ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ಹೊರಬಿಡಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದು, ಕೃಷ್ಣಾ ಪಾತ್ರದ ಗ್ರಾಮಸ್ಥರಿಗೆ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜಲಾಶಯದಿಂದ ಈಗಾಗಲೇ 1.21 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ನದಿಗೆ ಹೊರಬಿಡಲಾಗಿದೆ. 

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ಪಾತ್ರದಲ್ಲಿ ಭಾರಿ ಮಳೆಯಿಂದಾಗಿ ಇಂದು ಮಧ್ಯಾಹ್ನ ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ಹೊರಬಿಡಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದು, ಕೃಷ್ಣಾ ಪಾತ್ರದ ಗ್ರಾಮಸ್ಥರಿಗೆ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜಲಾಶಯದಿಂದ ಈಗಾಗಲೇ 1.21 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ನದಿಗೆ ಹೊರಬಿಡಲಾಗಿದೆ. 

click me!

Recommended Stories