ಯಾದಗಿರಿ ಜಿಲ್ಲಾದ್ಯಂತ ವರುಣನ ಅಬ್ಬರ: ಹೊಲ, ಗದ್ದೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ
First Published Sep 26, 2020, 1:42 PM ISTಯಾದಗಿರಿ(ಸೆ.26): ನಗರ ಸೇರಿದಂತೆ ಜಿಲ್ಲೆಯ ಶಹಪೂರ, ವಡಗೇರಾ, ಗುರುಮಠಕಲ್ ಸುರಪುರ, ಹುಣಸಗಿ ತಾಲೂಕುಗಳಲ್ಲಿ ಭೀಕರ ಮಳೆಯಾಗುತ್ತಿದೆ. ಇಂದು(ಶನಿವಾರ) ಬೆಳಗ್ಗೆಯಿಂದಲೂ ಸಹ ಹಲವೆಡೆ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದ ಜಿಲ್ಲಾದ್ಯಂತ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.