ಬಸ್‌-ಲಾರಿ ನಡುವೆ ಭೀಕರ ಅಪಘಾತ, ಇಬ್ಬರೂ ಡ್ರೈವರ್‌ಗಳ ಕಾಲು ಕಟ್‌!

Published : Sep 01, 2025, 04:25 PM IST

ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಲಾರಿ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಚಾಲಕರ ಕಾಲುಗಳು ಕಟ್ ಆಗಿವೆ. ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

PREV
17

ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಹಾಗೂ ಬಸ್‌ ನಡುವೆ ಭಾರೀ ಅಫಘಾತ ಸಂಭವಿಸಿದೆ.

27

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಬಳಿ ಘಟ‌ನೆ ನಡೆದಿದೆ. ಆಕ್ಸಿಡೆಂಟ್‌ ಆಗಿರುವ ರಭಸಕ್ಕೆ ಬಸ್‌ ಚಾಲಕ ಹಾಗೂ ಲಾರಿ ಚಾಲಕರ ಎರಡೂ ಕಾಲುಗಳು ಕಟ್‌ ಆಗಿವೆ.

47

ಕ್ರೇನ್ ಮೂಲಕ ವಾಹನಗಳನ್ನು ಪೊಲೀಸರು ಪಕ್ಕಕ್ಕೆ ಸರಿಸಿದ್ದಾರೆ. ಕಾಲುಗಳನ್ನು ಕಳೆದುಕೊಂಡ ಲಾರಿ ಚಾಲಕನ ರೋದನ ಹೇಳತೀರದಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

57

ಅಪಘಾತದಿಂದಾಗಿ ರಾಜ್ಯ ಹೆದ್ದಾರಿಯ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

67

ಒಳಗೆ ಸಿಲುಕಿದ ಚಾಲಕರನ್ನು ಹೊರ ತೆಗೆಯಲು ಸ್ಥಳೀಯ ಜನರು ಹಾಗೂ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೊಲ್ಹಾಪುರ ದಿಂದ ಮುಧೋಳ ಕಡೆಗೆ ಬಸ್ ಹೊರಟಿತ್ತು. ಅಪಘಾತದಿಂದ ಇಬ್ಬರೂ ಚಾಲಕರ ಸ್ಥಿತಿ ಗಂಭೀರವಾಗಿದೆ.

77

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

Read more Photos on
click me!

Recommended Stories