Kalaburagi Sharana Basaveshwara Matha: 5ರ ಬಾಲಕಗೆ ಶರಣ ಬಸವ ಪೀಠದ ಪಟ್ಟಾಧಿಕಾರ

Kannadaprabha News   | Asianet News
Published : Feb 08, 2022, 12:44 PM IST

ಕಲಬುರಗಿ(ಫೆ.08):  ಶರಣ ಬಸವೇಶ್ವರ ದಾಸೋಹ ಪೀಠದ(Sharana Basaveshwara Matha) ಅತಿ ಕಿರಿಯ ಪೀಠಾಧಿಪತಿ ಎಂದೇ ಹೆಸರಾಗಿರುವ 5 ವರ್ಷದ ಬಾಲಕ ಚಿ.ದೊಡ್ಡಪ್ಪ ಅಪ್ಪಾಜಿಗೆ(Doddappa Appalji) ಸಂಸ್ಥಾನದ 8ನೇ ಪೀಠಾಧಿಪತಿಗಳಾಗಿರುವ ಡಾ. ಶರಣಬಸವಪ್ಪ ಅಪ್ಪ(Dr Sharanabasappa Appa) ಅವರು ಸೋಮವಾರ ಮಧಾಹ್ನ 1ಕ್ಕೆ ನೆರವೇರಿದ ಧಾರ್ಮಿಕ ಸಮಾರಂಭದಲ್ಲಿ ಪಟ್ಟಾಧಿಕಾರ ಹಸ್ತಾಂತರಿಸಿದರು.

PREV
16
Kalaburagi Sharana Basaveshwara Matha: 5ರ ಬಾಲಕಗೆ ಶರಣ ಬಸವ ಪೀಠದ ಪಟ್ಟಾಧಿಕಾರ

ಈ ಪ್ರಕ್ರಿಯೆಯೊಂದಿಗೆ 2 ಶತಮಾನಗಳಿಂದಲೂ ಈ ನೆಲದ ದಾಸೋಹ ಪರಿಕಲ್ಪನೆಯ ಸನ್ನಿಧಾನ ಎಂದೇ ಹೆಸರಾಗಿರುವ ಶರಣಬಸವೇಶ್ವರ ಸಂಸ್ಥಾನದಲ್ಲಿ ನವ ಯುಗಕ್ಕೆ ಮುನ್ನುಡಿ ಬರೆಯಲಾಯಿತು. 

26

ದಾಸೋಹ ಮಹಾಮನೆಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು 9ನೇ ಪೀಠಾಧಿಪತಿಯಾಗಿರುವ(Successor) ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಗೆ ಹಿರಿಯ ಗುರುಗಳ ಸಮ್ಮುಖದಲ್ಲಿ ದಾಸೋಹ ಮಹಾಮನೆಯ ಸಂಪೂರ್ಣ ಜವಾಬ್ದಾರಿಯನ್ನು ಧಾರ್ಮಿಕ ವಿಧಿ-ವಿಧಾನಗಳನ್ನು ಈಡೇರಿಸುವ ಅಧಿಕಾರ ಅನುಗ್ರಹಿಸಿದರು.

36

2017ರ ನ.1ರಂದು ಜನಿಸಿದ ದೊಡ್ಡಪ್ಪ ಅಪ್ಪಾಜಿ ಅವರು 200 ವರ್ಷಗಳ ಹಿಂದೆ ಸ್ಥಾಪಿಸಿದ ಶರಣ ಬಸವೇಶ್ವರ ಸಂಸ್ಥಾನದ ಎಲ್ಲಾ ಪೀಠಾಧಿಪತಿಗಳಲ್ಲಿ ಅತ್ಯಂತ ಕಿರಿಯ ಪೀಠಾಧಿಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 

46

ನನ್ನ ಮಗ ಚಿರಂಜೀವಿ ದೊಡ್ಡಪ್ಪ ಅಪ್ಪನವರನ್ನು ಶರಣಬಸವೇಶ್ವರ ಸಂಸ್ಥಾನಕ್ಕೆ ನನ್ನ ಉತ್ತರಾಧಿಕಾರಿ ಎಂದು ಘೋಷಿಸುತ್ತೇನೆ’ ಎಂದು ತಿಳಿಸಿದ ಡಾ. ಶರಣಬಸವಪ್ಪ ಅಪ್ಪಾಜಿ

56

ಬೀದರ್‌(Bidar) ಜಿಲ್ಲೆಯ ಹಾರಕೂಡದ ಸಂಸ್ಥಾನ ಹಿರೇಮಠದ ಡಾ.ಚೆನ್ನವೀರ ಶಿವಾಚಾರ್ಯರು ದೊಡ್ಡಪ್ಪ ಅಪ್ಪಾಜಿಗೆ ಔಪಚಾರಿಕವಾಗಿ ಅಧಿಕಾರ ಹಸ್ತಾಂತರದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. 

66

ಬಳಿಕ ಲಿಂಗದೀಕ್ಷೆ ನೀಡಿದರು. 9ನೇ ಪೀಠಾಧಿಪತಿಗಳಿಗೆ ಪ್ರಸಾದ ಬಟ್ಟಲು, ಲಿಂಗ ಸಜ್ಜಿಕೆ (19ನೇ ಶತಮಾನದ ಶರಣಬಸವೇಶ್ವರರು ಬಳಸಿದ ಬೆಳ್ಳಿಯ ತಟ್ಟೆ ಮತ್ತು ಆತ್ಮಲಿಂಗ) ಹಸ್ತಾಂತರಿಸಿ ಧಾರ್ಮಿಕ ವಿಧಿವಿಧಾನಗಳು ಮತ್ತು ಪೂಜೆಗಳನ್ನು ನಡೆಸುವ ಅಧಿಕಾರವನ್ನು ನೂತನ ಪೀಠಾಧಿಪತಿಗಳಿಗೆ ಹಸ್ತಾಂತರಿಸಿದರು.

Read more Photos on
click me!

Recommended Stories