ರೈಲ್ವೆ ಮಂತ್ರಿಯನ್ನು ಕಾಣಲು ಅಭಿಮಾನಿಗಳ ದಂಡು ಅದೆಷ್ಟು ನೆರೆದಿತ್ತೆಂದರೆ, ಪೋಷಕರನ್ನು ಭೇಟಿ ಮಾಡಲು ಸಮಯ ಕಡಿಮೆಯಾಗಿದೆ. ತವರುನಾಡಿಗೆ ತೆರಳಿದ ಸಚಿವರು ಅಲ್ಲಿ ಉಳಿದಿದ್ದು ಕೇವಲ ಒಂದು ದಿನ. ತಂದೆಗೆ ಮಗನಿಗೆ ಹೇಳಲು ಅನೇಕ ವಿಷಯಗಳಿದ್ದವು, ಆದರೆ ಸಮಯ ಾಭಾವವಿತ್ತು, ಹಾಗಾಗಿ ಅವರು ತನ್ನ ಮಗನಿಗೆ ಪತ್ರವನ್ನು ನೀಡಿದ್ದಾರೆ. ಅಲ್ಲದೇ ನಾನು ನನ್ನ ಎಲ್ಲಾ ವಿಷಯಗಳನ್ನು ಅದರಲ್ಲಿ ಬರೆದಿದ್ದೇನೆ, ನಿಮಗೆ ಸಮಯ ಸಿಕ್ಕಾಗ ಅದನ್ನು ಓದು ಎಂದಿದ್ದಾರೆ. ಆದರೆ ಮಗನ ಕೋರಿಕೆ ಮೇರೆಗೆ, ತಂದೆ ಈ ಪತ್ರವನ್ನು ಓದಿದ್ದಾರೆ. ಇದರಲ್ಲಿ ಸಚಿವನಾದ ತನ್ನ ಪುತ್ರನಿಗ, ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡು ಎಂದು ತಂದೆ ತಿಳಿಸಿದ್ದಾರೆ.