Clean India: ಕಸ ಆಯ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್, ತಿಂಗಳಿಗೆ 75ಕೆಜಿಯ ಟಾರ್ಗೆಟ್!

First Published Oct 12, 2021, 2:03 PM IST

ದೇಶದಲ್ಲಿನ ಸ್ವಚ್ಛತೆಯ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಲು ಅಕ್ಟೋಬರ್ 1 ರಿಂದ 31 ರವರೆಗೆ ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನವನ್ನು ನಡೆಸಲಾಗುತ್ತಿದೆ. ಹೀಗಿರುವಾಗ, ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರು ಸಾಂಪ್ರದಾಯಿಕ ಹುಮಾಯೂನ್ ಸಮಾಧಿಯ ಆವರಣವನ್ನು ಸ್ವಚ್ಛಗೊಳಿಸಿದರು. ಕಳೆದ 10 ದಿನಗಳಲ್ಲಿ 30 ಲಕ್ಷ ಕೆಜಿ ಕಸವನ್ನು ದೇಶಾದ್ಯಂತ ಸಂಗ್ರಹಿಸಲಾಗಿದೆ. ಸ್ವಚ್ಛತಾ ಅಭಿಯಾನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಈ ಸ್ವಚ್ಛತಾ ಅಭಿಯಾನವನ್ನು ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವಲ್ಲಿ ಜನರು ಹೆಚ್ಚು ಭಾಗವಹಿಸುವ ಕಡೆ ಹರಿಸಲಾಗಿದೆ.
 

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸ್ವಯಂಸೇವಕರೊಂದಿಗೆ ದೆಹಲಿಯ ಹುಮಾಯೂನ್ ಸಮಾಧಿಯ ಆವರಣಕ್ಕೆ 12 ಅಕ್ಟೋಬರ್ ಬೆಳಿಗ್ಗೆ ಆಗಮಿಸಿದರು. ಯುವ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಉಷಾ ಶರ್ಮಾ ಉಪಸ್ಥಿತರಿದ್ದರು.
 

ಈ ಸಂದರ್ಭದಲ್ಲಿ ಸಚಿವ ಅನುರಾಗ್ ಠಾಕೂರ್ ಅವರು ಮಾತನಾಡಿ, ಸ್ವಚ್ಛ ಭಾರತ ಅಭಿಯಾನದ ಉದ್ದೇಶ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸನ್ನು ಈಡೇರಿಸುವುದು. ಈ ಅಭಿಯಾನದ ಮೂಲಕ ನಾವು ಸ್ವಚ್ಛ ಭಾರತ ಅಭಿಯಾನವನ್ನು ಆಯೋಜಿಸುವುದಲ್ಲದೆ ಸ್ವಚ್ಛ ಮತ್ತು ಆರೋಗ್ಯಕರ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದಿದ್ದಾರೆ.

ಈ ಯೋಜನೆ ಮೂಲಕ 2021 ಅಕ್ಟೋಬರ್ 1 ರಿಂದ 31 ರವರೆಗೆ ಯುವಕರ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಮುಖ್ಯವಾಗಿ 75 ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ ಎಂದು ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದರು.

ಸ್ವಚ್ಛ ಭಾರತವು ಯುವಕರ ನೇತೃತ್ವದ ಕಾರ್ಯಕ್ರಮವಾಗಿದ್ದು, ನೆಹರು ಯುವ ಕೇಂದ್ರ ಸಂಘಟನೆಗೆ (NYKS) ಸಂಯೋಜಿತವಾಗಿರುವ ಯುವ ಕ್ಲಬ್‌ಗಳ ಸಹಯೋಗದೊಂದಿಗೆ ಮತ್ತು ದೇಶಾದ್ಯಂತ 744 ಜಿಲ್ಲೆಗಳ 6 ಲಕ್ಷ ಗ್ರಾಮಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಸಂಯೋಜಿತವಾಗಿರುವ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಧಾರ್ಮಿಕ ಸಂಸ್ಥೆಗಳು, ಶಿಕ್ಷಕರು, ಕಾರ್ಪೊರೇಟ್ ಗುಂಪುಗಳು, ಟಿವಿ ಮತ್ತು ಚಲನಚಿತ್ರ ನಟರು, ಮಹಿಳಾ ಗುಂಪುಗಳು ಇತ್ಯಾದಿ ರಾಷ್ಟ್ರವ್ಯಾಪಿ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸುತ್ತಿವೆ.


ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನವು ಪ್ರಧಾನಿ ನರೇಂದ್ರ ಮೋದಿಯವರ ಕ್ರಮವಾಗಿದ್ದು, ಇದು ದೇಶಕ್ಕೆ ಸ್ವಚ್ಛತೆಯ ಸಂದೇಶವನ್ನು ನೀಡಿದೆ. ಇದನ್ನು 2014 ರಿಂದ ಆರಂಭಿಸಲಾಯಿತು.

click me!