ವಾಸ್ತವವಾಗಿ, ಪ್ರತಿ ತಿಂಗಳು ಶ್ರೀ ಸಾನ್ವಾಲಿಯಾ ಸೇಠ್ ದೇವಾಲಯದ ದೇಣಿಗೆ ಪೆಟ್ಟಿಗೆಯನ್ನು ತೆರೆಯಲಾಗುತ್ತದೆ. ಈ ಬಾರಿ ಮಂಗಳವಾರ ಅಂದರೆ ಕೃಷ್ಣ ಚತುರ್ದಶಿಯಂದು ತೆರೆಯಲಾಯಿತು. ಕಳೆದ ಎರಡು ದಿನಗಳ ಕಾಲ ನಿರಂತರವಾಗಿ ನೋಟುಗಳ ಎಣಿಕೆ ನಡೆಯುತ್ತಿದೆದ್ದು, ಇದರಲ್ಲಿ ದೇವಸ್ಥಾನ ಸಮಿತಿಯು 150 ಕ್ಕೂ ಹೆಚ್ಚು ಜನರು ಸೇವೆ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೆ ಎಣಿಕೆ ಪೂರ್ಣಗೊಂಡಿಲ್ಲ. ಪ್ರತಿ ವರ್ಷದಂತೆ, ಈ ಬಾರಿಯೂ ನೋಟುಗಳನ್ನು ಎಣಿಸಲು ಕನಿಷ್ಠ 8 ರಿಂದ 10 ದಿನಗಳು ಆಗಬಹುದೆನ್ನಲಾಗಿದೆ. ಸದ್ಯಕ್ಕೆ, ದೇವಾಲಯದ ಬಾಗಿಲು ಭಕ್ತರಿಗಾಗಿ ಮುಚ್ಚಲ್ಪಟ್ಟಿದೆ, ಇನ್ನು ಗುರುವಾರ ದೇಗುಲ ತೆರೆಯಲಾಗುತ್ತದೆ.