ಅಂದು ಜಯಲಲಿತಾ, ಇಂದು ಅಮಿತ್ ಶಾ; ತಮಿಳುನಾಡಿನ ರಾಜಕಾರಣಿ ಮನೆ ನೋಡಿ ಶಾಕ್

Published : Aug 23, 2025, 03:28 PM IST

ಮಾಜಿ ಸಿಎಂ ಜಯಲಲಿತಾ  ಒಮ್ಮೆ ಸಮಾವೇಶಕ್ಕೆ ಜಾಗ ಹುಡುಕುತ್ತಿದ್ದರು. ಅಂದು ಆ ಉದ್ಯಮಿ  100 ಎಕರೆ ಜಮೀನು ಖರೀದಿಸಿ ಜಯಲಲಿತಾ ಅವರಿಗೆ ನೀಡಿದ್ರಂತೆ. ಇಂದು ಅದೇ ಉದ್ಯಮಿ ಮನೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಅಮಿತ್ ಶಾ,  ಫೈವ್ ಸ್ಟಾರ್  ಹೋಟೆಲ್‌ನಂತಿರೋ ಬಂಗ್ಲೆ ನೋಡಿ ಒಂದು ಕ್ಷಣ ಶಾಕ್ ಆಗಿದ್ರಂತೆ.

PREV
16

ಚುನಾವಣೆಗೆ 7 ತಿಂಗಳು ಇರುವಾಗ, ಬಿಜೆಪಿ ನಾಯಕರು ತಮಿಳುನಾಡಿನ 30 ಕ್ಷೇತ್ರಗಳಲ್ಲಿ ಬೂತ್ ಕಮಿಟಿ ಮಾಡುವ  ಮೂಲಕ ಸಂಘಟನೆಗೆ ಆದ್ಯತೆ ನೀಡುತ್ತಿದ್ದಾರೆ. ನೆಲ್ಲಿ ಎಂಬಲ್ಲಿ ಬಿಜೆಪಿ  ಬೂತ್ ಕಮಿಟಿ ಸಮಾವೇಶ ನಡೆದಿದೆ. ಇದೇ ಕ್ಷೇತ್ರದ ನಾಯಕರಾಗಿರುವ  ನಯಿನಾರ್ ನಾಗೇಂದ್ರನ್, ತಮ್ಮ ಮನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಸ್ಟಾರ್ ಹೋಟೆಲ್ ನಂತಿದ್ದ ಮನೆಯನ್ನು ನೋಡಿ  ಅಮಿತ್ ಶಾ ಒಂದು ಕ್ಷಣ ಶಾಕ್ ಆದ್ರಂತೆ.

26

ತಿರುನೆಲ್ವೇಲಿ ಪೆರುಮಾಳ್ಪುರಂನಲ್ಲಿರೋ ನಯಿನಾರ್ ನಾಗೇಂದ್ರನ್ ಮನೆ 10,000 ಚದರ ಅಡಿಗಿಂತ ಅಧಿಕ ವಿಸ್ತಾರದಲ್ಲಿ ನಿರ್ಮಾಣ  ಮಾಡಲಾಗಿದೆ . ಕೆಲವು ತಿಂಗಳ ಹಿಂದೆ ಇದೇ ಮನೆಯಲ್ಲಿ ಇಪಿಎಸ್‌ಗೆ 100 ತರಹದ  ಊಟ ಹಾಕಿದ್ರಂತೆ. ನಯಿನಾರ್ ನಾಗೇಂದ್ರನ್ ತಂದೆ ನಯಿನಾರ್ ದೇವರ್ ದೊಡ್ಡ ಜಮೀನ್ದಾರರಾಗಿದ್ದರು. ವಾರದ ಸಂತೆ, ಪರ್ಮಿಟ್ ಇದ್ದಾಗ ಸಾರಾಯಿ ಅಂಗಡಿ, ಬಾರ್, ಕ್ಲಬ್, ಜಮೀನು ಕೊಂಡುಕೊಳ್ಳೋದು, ಮಾರಾಟ ಸೇರಿದಂತೆ ವಿವಿಧ  ವ್ಯವಹಾರಗಳನ್ನು ಈ ಕುಟುಂಬ ಮಾಡಿಕೊಂಡ ಬರುತ್ತಿದೆ. ಒಂದು ರೀತಿಯಲ್ಲಿ ಹೇಳುವುದಾದ್ರೆ ಹಣದ ಕೊಳದಲ್ಲಿ ಈ  ಕುಟುಂಬವಿದೆ.

36

ನಯಿನಾರ್ ನಾಗೇಂದ್ರನ್ ಊರಿನಲ್ಲಿ ಅವ್ರನ್ನ 'ಪಣ್ಣೆಯಾರ್' ಎಂದು ಕರೆಯಲಾಗುತ್ತದೆ. ಅಷ್ಟು ದೊಡ್ಡ ಫ್ಯಾಮಿಲಿ ಅವರದ್ದು. ತಿರುನೆಲ್ವೇಲಿಯಲ್ಲಿ ದೊಡ್ಡ ಹಾಲು ಫ್ಯಾಕ್ಟರಿ ಇಟ್ಕೊಂಡಿದ್ದರಿಂದ 'ಪಣ್ಣೆಯಾರ್' ಅಂತ ಕರೀತಾರಂತೆ. ಜಯಲಲಿತಾ ಸಮಾವೇಶಕ್ಕೆ ಜಾಗ ಹುಡುಕ್ತಿದ್ರಂತೆ. ಆಗ ನಯಿನಾರ್ ನಾಗೇಂದ್ರನ್ 100 ಎಕರೆ ಜಮೀನನ್ನೇ ಕೊಂಡ್ಕೊಟ್ಟರಂತೆ. ಜಯಲಲಿತಾ ಕೂಡ ಶಾಕ್ ಆಗಿದ್ರಂತೆ. 

ಬ್ಯುಸಿನೆಸ್ ಮೇಲೆ ಜಾಸ್ತಿ ಫೋಕಸ್ ಇಟ್ಕೊಂಡಿರೋ ನಯಿನಾರ್, ತಮ್ಮ ಬ್ಯುಸಿನೆಸ್‌ನ ದುಡ್ಡನ್ನ ರಕ್ಷಣೆ ಮಾಡ್ಕೊಳ್ಳೋಕೆ ಪಾಲಿಟಿಕ್ಸ್‌ಗೆ ಬಂದ್ರಂತೆ. 1990-96ರಲ್ಲಿ ಮಿನಿಸ್ಟರ್ ಆಗಿದ್ದಾಗ ದುಡ್ಡು ಮಾಡ್ಕೊಂಡು, ಈಗ ನೂರಾರು ಕೋಟಿ ಒಡೆಯ ಆಗಿದ್ದಾರೆ ಎಂಬ ಆರೋಪಗಳು ಇವರ  ಮೇಲಿವೆ. ಹೋಟೆಲ್, ಲಾಡ್ಜ್, ಕೇರಳದಲ್ಲಿ ರೆಸಾರ್ಟ್, ಜಮೀನು, ಬಾಡಿಗೆ ಹೀಗೆ ಹಲವು  ವ್ಯವಹಾರಗಳಲ್ಲಿ ಈ ಕುಟುಂಬ ಸಕ್ರಿಯವಾಗದೆ. 

10 ವರ್ಷದಿಂದ ರಿಯಲ್ ಎಸ್ಟೇಟ್‌ನಲ್ಲೂ ಈ ಕುಟುಂಬ ತನ್ನ ವ್ಯವಹಾರ  ನಡೆಸಿಕೊಂಡು  ಬರುತ್ತಿದೆ. ತಿರುನೆಲ್ವೇಲಿ ಮಾತ್ರ ಅಲ್ಲ, ಚೆನ್ನೈ, ಇಸಿಆರ್‌ನಲ್ಲೂ ದೊಡ್ಡ ಮನೆಯನ್ನು ನಯಿನಾರ್ ಹೊಂದಿದ್ದಾರೆ. ಎಗ್ಮೋರ್‌ನ ಬ್ಲೂ ಡೈಮಂಡ್ ಹೋಟೆಲ್ ಮಾಲೀಕರು ಇವರೇ ಆಗಿದ್ದಾರೆ.

46

2006-11ರಲ್ಲಿ ಡಿಎಂಕೆ ಸರ್ಕಾರ ಇದ್ದಾಗಲೂ ನಯಿನಾರ್ ನಾಗೇಂದ್ರನ್ ಬ್ಯುಸಿನೆಸ್ ಚೆನ್ನಾಗಿ ನಡೀತಿತ್ತಂತೆ. ಸರ್ಕಾರಿ ಬಸ್‌ಸ್ಟ್ಯಾಂಡ್ ಜಾಗಗಳನ್ನ ಲೀಸ್‌ಗೆ ತಗೊಂಡ್ರಂತೆ. ಸರ್ಕಾರಿ ಹೋಟೆಲ್‌ಗಳನ್ನೂ ಲೀಸ್‌ಗೆ ತಗೊಂಡ್ರಂತೆ. ಲೋಕಲ್ ಡಿಎಂಕೆ ಮಿನಿಸ್ಟರ್ ಜೊತೆ ಸೇರಿ ಬ್ಯುಸಿನೆಸ್ ದೊಡ್ಡದು ಮಾಡ್ಕೊಂಡ್ರಂತೆ. ಆಂಧ್ರದ ಕಡಪ್ಪದಲ್ಲಿ ಗ್ರಾನೈಟ್ ಕ್ವಾರಿಗಳೂ ಇವ್ರದ್ದೇ. 

ಜಯಲಲಿತಾ ಸರ್ಕಾರದಲ್ಲಿ ವಿದ್ಯುತ್, ಇಂಡಸ್ಟ್ರಿ ಮಿನಿಸ್ಟರ್ ಆಗಿದ್ದರು. ಟ್ರಾನ್ಸ್‌ಪೋರ್ಟ್ ಮಿನಿಸ್ಟರ್ ಆಗಿದ್ದಾಗ, ಮೇನ್ ಬಸ್‌ಸ್ಟ್ಯಾಂಡ್ ಹತ್ರ ಇರೋ ಹೋಟೆಲ್‌ಗಳು ಇವ್ರದ್ದೇ ಅಥವಾ ಪಾರ್ಟ್‌ನರ್‌ಶಿಪ್‌ನಲ್ಲಿ ಇವ್ರು ಇರ್ತಿದ್ರಂತೆ. ಸರ್ಕಾರಿ ಜಾಗಗಳನ್ನ 49, 60, 99 ವರ್ಷ ಲೀಸ್‌ಗೆ ತಗೊಂಡು ದುಡ್ಡು ಮಾಡ್ತಿದ್ರಂತೆ  ಎಂಬ ಆರೋಪಗಳು ಇವರ  ಸುತ್ತಲೇ ಇರುತ್ತವೆ.

56

2021ರ ಚುನಾವಣೆಯಲ್ಲಿ 1500 ಕೋಟಿ ಆಸ್ತಿ ಇರೋದನ್ನ ಮುಚ್ಚಿದ್ರಂತೆ. ಈಗ ತಮಿಳುನಾಡಲ್ಲಿರೋ ಜಾಸ್ತಿ ಆಸ್ತಿಗಳನ್ನ ಕೊಂಡು, ಸರಿ ಮಾಡಿ ಮಾರುವ ಕೆಲಸ ಮಾಡ್ತಾರಂತೆ ಮಗ ನಯಿನಾರ್ ಬಾಲಾಜಿ.

66

ಕೆಲವು ತಿಂಗಳ ಹಿಂದೆ ವಿರುಗಂಬಾಕಂನಲ್ಲಿರೋ 100 ಕೋಟಿ ಬೆಲೆಬಾಳುವ 1.3 ಎಕರೆ ಜಾಗವನ್ನ ರಾಧಾಪುರಂನಲ್ಲಿ ರಿಜಿಸ್ಟರ್ ಮಾಡಿದ್ರಂತೆ ನಯಿನಾರ್ ಮಗ. ಈಗ ತಮಿಳುನಾಡಲ್ಲಿರೋ ಜಾಸ್ತಿ ಆಸ್ತಿಗಳನ್ನ ಕೊಂಡು, ಸರಿ ಮಾಡಿ ಮಾರುವ ಕೆಲಸ ಮಾಡ್ತಾರಂತೆ ಮಗ ನಯಿನಾರ್ ಬಾಲಾಜಿ.

Read more Photos on
click me!

Recommended Stories