ಕಾಮಕಾಂಡ ಗುರೂಜಿಗೆ ಹೊಸ ತಲೆನೋವು, 2022ರಲ್ಲಿ ನಡೆದ ಆ ಘಟನೆ ಮರುತನಿಖೆ

Published : Apr 03, 2026, 02:54 PM IST

ಕಾಮಕಾಂಡ ಗುರೂಜಿಗೆ ಹೊಸ ತಲೆನೋವು, 2022ರಲ್ಲಿ ನಡೆದ ಆ ಘಟನೆ ಮರುತನಿಖೆ, ಜೈಲು ಸೇರಿರುವ ನಕಲಿ ಗುರೂಜಿ ಅಶೋಕ್ ಖಾರತ್‌ಗೆ ಹಳೇ ಪ್ರಕರಣಗಳು ಆತಂಕ ಹೆಚ್ಚಿಸಿದೆ. ಇದೀಗ 2022ರ ಘಟನೆ ಶಿಕ್ಷೆ ಪ್ರಮಾಣ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

PREV
15
ಗುರೂಜಿಗೆ ಹೆಚ್ಚಾಗುತ್ತಿದೆ ಸಂಕಷ್ಟ

100ಕ್ಕೂ ಹೆಚ್ಚು ಮಹಿಳೆಯನ್ನು ಪೂಜೆ, ಆಧ್ಯಾತ್ಮದ ಹೆಸರಿನಲ್ಲಿ ಬಳಸಿಕೊಂಡ ಕಳ್ಳ ಗುರೂಜಿ ಅಶೋಕ್ ಖಾರತ್ ಈಗ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ರಾಜಕಾರಣಿಗಳು, ಸಚಿವರು, ಅಧಿಕಾರಿಗಳು, ಪೊಲೀಸರು ಎಲ್ಲರ ಸಂಪರ್ಕದಲ್ಲಿದ್ದ ಶ್ರೀಮಂತ ಸ್ವಯಂ ಘೋಷಿತ ದೇವಮಾನವ ಅಶೋಕ್ ಖಾರತ್‍‌ಗೆ ದಿನದಿಂದ ದಿನಕ್ಕೆ ಸಂಕಷ್ಟಗಳು ಹೆಚ್ಚಾಗುತ್ತಿದೆ. ಇದೀಗ ಹೊಸ ತಲೆನೋವು ಹೆಚ್ಚಿದೆ.

25
2022ರ ಕೇಸ್ ರಿಒಪನ್

ಮಹಿಳೆಯ ಮೇಲೆ ಅತ್ಯಾ**ರ, ಆಧ್ಯಾತ್ಮ ಹೆಸರಿನಲ್ಲಿ ವಂಚನೆ, ಸುಲಿಗೆ ಮಾಡಿದ ಪ್ರಕರಣಗಳು ಈಗಾಗಲೇ ಅಶೋಕ್ ಖಾರತ್ ಮೇಲೆ ದಾಖಲಾಗಿದೆ. ಅಶೋಕ್ ಖಾರತ್ ಅರೆಸ್ಟ್ ಬಳಿಕ ಇದೀಗ 2022ರಲ್ಲಿ ನಡೆದ ಆತ್ಮ**ತ್ಯೆ ಪ್ರಕರಣವನ್ನು ಮರು ತನಿಖೆ ಮಾಡಲು ಎಸ್ಐಟಿ ಪೊಲೀಸರು ಮುಂದಾಗಿದ್ದಾರೆ. 37 ವರ್ಷದ ವಿಕಾಸ್ ರಾಮದಾಸ್ ದಿವಟೆ ಪ್ರಕರಣ ಇದೀಗ ಕೋಲಾಹಲ ಸೃಷ್ಟಿಸಿದೆ. ಈ ಪ್ರಕರಣ ಕಳ್ಳ ಗುರು ಅಶೋಕ್ ಖಾರತ್ ಶಿಕ್ಷೆ ಪ್ರಮಾಣ ಮತ್ತಷ್ಟು ಹೆಚ್ಚಿಸಲಿದೆ.

35
ಚಾರ್ಜ್‌ಶೀಟ್‌ನಿಂದ ಅಶೋಕ್ ಖಾರಟ್ ಹೆಸರು ಮಾಯ

ವಿಕಾಸ್ ರಾಮದಾಸ್ ಬರೆದ ಡೆತ್‌ನೋಟ್‌ನಲ್ಲಿ ಅಶೋಕ್ ಖಾರತ್ ಹೆಸರು ಉಲ್ಲೇಖಿಸಿದ್ದರು. ತನ್ನ ಸಾವಿಗೆ ನೇರ ಕಾರಣ ಎಂದು ಬರೆದಿದ್ದರು. ಇದರ ಜೊತೆಗೆ ತನ್ನ ಅತ್ತೆ ಮಾವ ಕೂಡ ಸಾವಿಗೆ ಕಾರಣ ಎಂದಿದ್ದರು. ತನಿಖೆಯಲ್ಲೂ ಅಶೋಕ್ ಖಾರತ್ ವಿರುದ್ದ ಹಲವು ಸಾಕ್ಷ್ಯಗಳು ಸಿಕ್ಕಿತ್ತು. ಆದರೆ ಪ್ರಭಾವ ಬಳಸಿದ ಅಶೋಕ್ ಖಾರಟ್ ತನ್ನ ಹೆಸರು ಚಾರ್ಜ್‌ಶೀಟ್‌ನಿಂದ ತೆಗೆದು ಹಾಕಿದ್ದರು.

45
ಸಂತ್ರಸ್ತರು ಮುಂದೆ ಬರಲು ಪೊಲೀಸರ ಮನವಿ

2022ರ ರಾಮದಾಸ್ ಕೇಸ್ ತನಿಖೆ ನಡೆಯಲಿದೆ. ಇದರಲ್ಲಿ ಅಶೋಕ್ ಖಾರತ್ ಪಾತ್ರದ ಬಗ್ಗೆ ತನಿಖೆ ನಡೆಯಲಿದೆ. ಇದೇ ವೇಳೆ ಎಸ್ಐಟಿ ಪೊಲೀಸರು, ಅಶೋಕ್ ಖಾರತ್‌ನಿಂದ ಸಮಸ್ಯೆ ಎದುರಿಸಿದವರು, ತೊಂದರೆಗೊಳಗಾದವರು, ಯಾವುದೇ ರೀತಿಯಲ್ಲಿ ನೋವುಂಡವರು ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ.

55
ಮಾನ, ಸಂಸಾರಕ್ಕೆ ಅಂಜಿ ಹಲವರು ಮೌನ

ಅಶೋಕ್ ಖಾರತ್ ಬಳಿ ಬರುತ್ತಿದ್ದ ಬಹುತೇಕ ಮಹಿಳೆಯರ ಮೇಲೆ ಅತ್ಯಾ**ರ ಎಸಗಿದ್ದಾನೆ. ಪ್ರಸಾದ ಹೆಸರಿನಲ್ಲಿ ವಯಾಗ್ರ ನೀಡಿ ಮಹಿಳೆಯರ ಬಳಸಿಕೊಳ್ಳುತ್ತಿದೆ. ಕಚೇರಿಯಲ್ಲೇ ಮಹಿಳೆಯರ ಗಂಡಂದಿರನ್ನು ಹೊರಗೆ ಕೂರಿಸಿ ಒಳಗೆ ಮಹಿಳೆಯರ ಜೊತೆ ಚಕ್ಕಂದ ಆಡುತ್ತಿದ್ದ. ಹಲವು ಯುವತಿಯರು ಈತನ ಮೋಸದಾಟದಲ್ಲಿ ಬಲಿಪಶುಗಳಾಗಿದ್ದಾರೆ. ಈ ಪೈಕಿ ತಮ್ಮ ಸಂಸಾರವೇ ಒಡೆದು ಹೋಗಲಿದೆ ಎಂದು ಅಂಜಿ ಹಲವರು ಮೌನಕ್ಕೆ ಜಾರಿದ್ದಾರೆ.

ಸಂಸಾರಕ್ಕೆ ಅಂಜಿ ಹಲವರು ಮೌನ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories