8 ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ ಆರ್ಟಿಐ: ಎರಡು ಅವಧಿಗೆ ಪ್ರಧಾನಿ ಆಗಿದ್ದಾಗ್ಯೂ, ಮಿತ ಭಾಷಿಯಾಗಿಯೇ ಇದ್ದ ಡಾ. ಸಿಂಗ್ ಅವರನ್ನು ಅವರ ವಿರೋಧಿಗಳು ಮೌನಿ ಪ್ರಧಾನಿ ಎಂದೇ ಗೇಲಿ ಮಾಡುತ್ತಿದ್ದರು. ಅಲ್ಲದೆ, ಡಾ. ಸಿಂಗ್ ಅವರು ಸೋನಿಯಾ ಗಾಂಧಿ ಅವರ ಮೂಗಿನ ನೇರಕ್ಕೆ ಕಾರ್ಯ ನಿರ್ವಹಿಸುತ್ತಾರೆ ಎಂದೆಲ್ಲಾ ತಮ್ಮ ರಾಜಕೀಯ ವಿರೋಧಿಗಳು ಜರಿಯುತ್ತಿದ್ದರು. ಆದರೆ, ಇಂಥ ಆರೋಪಗಳಿಗೆಲ್ಲಾ ಮೌನದಿಂದಲೇ ಉತ್ತರಿಸುತ್ತಿದ್ದಡಾ. ಸಿಂಗ್ ಅವರು ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ಸಲುವಾಗಿ 2005ರಲ್ಲಿ ಆರ್ ಟಿಐ(ಮಾಹಿತಿ ಹಕ್ಕು) ಕಾಯ್ದೆ ಜಾರಿ ಮಾಡಿದರು. ಸರ್ಕಾರದ ಯಾವುದೇ ಸಂಸ್ಥೆಯೊಂದರಿಂದ ಯಾವುದೇ ಮಾಹಿತಿ ಕೋರುವ ಅಧಿಕಾರವನ್ನು ಸಾಮಾನ್ಯ ವ್ಯಕ್ತಿಗೆ ಈ ಕಾಯ್ದೆ ದಯ ಪಾಲಿಸಿತ್ತು. ಈ ಮೂಲಕ ಭ್ರಷ್ಟಾಚಾರ ವಿರುದ್ಧ ಹೋರಾಡುವ ಕಾರ್ಯಕರ್ತರಿಗೆ ಒಂದು ಅಸ್ತ್ರವನ್ನು ಒದಗಿಸಿಕೊಟ್ಟಿತ್ತು.