ಡ್ರ್ಯಾಗನ್ಗೆ ನೋ ಎಂದ ಅಮೂಲ್:ತನ್ನ ಸೃಜನಶೀಲತೆಯಿಂದ ಜಾಹೀರಾತುಗಳಿಂದ ಅಮೂಲ್ ಸದಾ ಸುದ್ದಿಯಲ್ಲಿರುತ್ತವೆ. ದೇಶ ಪ್ರಮುಖ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಆ್ಯಡ್ ಸೃಷ್ಟಿಸುವುದರಲ್ಲಿ ಅಮೂಲ್ ಎತ್ತಿದ ಕೈ. ಚೀನಾದೊಂದಿಗೆ ಭಾರತ ಯುದ್ಧ ಸಾರಲು ಮುಂದಾಗಿ, ಮೋದಿ ಆತ್ಮ ನಿರ್ಭರ ಭಾರತಕ್ಕೆ ಕರೆ ನೀಡಿದ್ದರು. ಚೀನಾ ಆ್ಯಪ್ಸ್ ನಿಷೇಧಕ್ಕೊಳಗಾಗಿದ್ದವು.ಆಗ ಡ್ರ್ಯಾಗನ್ ಅಮೂಲ್ ಬೇಬಿ ನೋ ಎಂದು ಹೇಳಿದ ಪೋಸ್ಟ್ ಸದ್ದು ಮಾಡಿತ್ತು. ಈ ಪೋಸ್ಟನ್ನು ಟ್ವಿಟರ್ ನಿಷೇಧಿಸಿತ್ತು. ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸದ ಅಮೂಲ್ ಸಿಎಂಡಿ, ದೇಶ ವಾಸಿಗಳ ಭಾವನೆಯಲ್ಲಿ ಈ ಆ್ಯಡ್ ಮೂಲಕ ಅಭಿವ್ಯಕ್ತಗೊಳಿಸಿದ್ದರು. ಅದಕ್ಕೆ ವಿರೋಧ ವ್ಯಕ್ತವಾಗಿತ್ತು.
undefined
ಕೆಂಟ್ ಆರ್ಓ :ಎರಡು ಕೈ ಗಳಿಂದ ಹಿಟ್ಟು ಕಲೆಸುವ ಕೆಂಟ್ ಆರ್ಓ ಜಾಹೀರಾತಿಗೆ ನೆಟ್ಟಿಗರು ಸಿಕ್ಕಾಪಟ್ಟೆ ತೀವ್ರವಾಗಿ ಕಾಮೆಂಟ್ ಮಾಡಿದರು. ಹೇಮಾ ಮಾಲಿನಿ ಮತ್ತು ಅವರ ಮಗಳು ಇಶಾ ಡಿಯೋಲ್ ಕಾಣಿಸಿಕೊಳ್ಳುವ ಜಾಹೀರಾತಿಗೆಸಾಕಷ್ಟು ನೆಗೆಟಿವ್ ಪ್ರತಿಕ್ರಿಯೆಗಳು ಬಂದವು. ನಂತರ ಅವರು ಕ್ಷಮೆಯಾಚಿಸಿದರು.
undefined
ಅಮೂಲ್:ಅಮೂಲ್ ಈ ಆ್ಯಡ್ ಪೋಸ್ಟ್ ಮಾಡಿದ್ದರಿಂದ ತುಸು ಕಾಲ ಅಮೂಲ್ ಪೋಸ್ಟನ್ನ್ ಟ್ವೀಟರ್ ತಡೆ ಹಿಡಿದಿತ್ತು.
undefined
ತನೀಷ್ಕ್: ಮುಸ್ಲಿಂ ಕುಟುಂಬಕ್ಕೆ ಸೇರಿದ ಹಿಂದೂ ಸೊಸೆಯ ಸೀಮಂತವನ್ನು ಜಾಹೀರಾತು ತೋರಿಸುತ್ತದೆ. ಇದು ಅಂತರಜಾತಿ ಮತ್ತು ಅಂತರ-ಧರ್ಮದ ಮದುವೆಯನ್ನು ಚಿತ್ರಿಸುತ್ತದೆ. 'ಲವ್ ಜಿಹಾದ್' ಸಪೋರ್ಟ್ ಮಾಡಲಾಗುತ್ತಿದೆ ಎಂದು ಹಲವಾರು ನೆಟಿಜನ್ಗಳು ಈ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದರು. ತನಿಷ್ಕ್ ಉತ್ಪನ್ನಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರಿಂದ, ಕಂಪನಿ ಜಾಹೀರಾತನ್ನು ಹಿಂಪಡೆಯಿತು.
undefined
ಪೇಟಿಎಮ್:ಇದರ ಜಾಹೀರಾತಿನಲ್ಲಿ ತನ್ನ ಟೀಮ್ ಅನ್ನು ಸಪೋರ್ಟ್ ಮಾಡುವ ಹುಡುಗನಿಗೆ ಕೋಚ್ ಹೊಡೆಯುವುದನ್ನು ತೋರಿಸಲಾಗಿತ್ತು. ನಂತರ ಆ ಹುಡುಗ ದೊಡ್ಡವನ್ನಾಗಿ ಸಚಿನ್ ತೆಂಡೂಲ್ಕರ್ ಆಗುತ್ತಾನೆ. ರಾಷ್ಟ್ರಮಟ್ಟದ ಟಿವಿಯಲ್ಲಿ ಮಗುವನ್ನು ಹೊಡೆಯುವುದನ್ನು ತೋರಿಸುವುದರ ವಿರುದ್ಧ ತೀವ್ರವಾಗಿ ನೆಟ್ಟಿಗರು ಪ್ರತಿಕ್ರಿಯಿಸಿದರು.
undefined
ತನೀಷ್ಕ್:ತನೀಷ್ಕ್ನ ದೀಪಾವಳಿ ಆ್ಯಡ್ ಕೂಡ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಯಿತು. ಪಟಾಕಿ ಹೊಡೆಯದಂತೆ ಸಂದೇಶ ನೀಡಿದ ಈ ಜಾಹೀರಾತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯಿತು. ಜಾಹೀರಾತು ಹೇಗೆ ಹಬ್ಬ ಮಾಡಬೇಕು ಎಂಬುದನ್ನು ಹೇಳುವಂತಿರಬಾರದು ಎಂದು ತೀವ್ರವಾಗಿ ಕಾಮೆಂಟ್ ಮಾಡಿದ್ದರು.
undefined