ಇದರೊಂದಿಗೆ ಆಪರೇಶನ್ ಗಂಗಾ ಎಂಬ ಯೋಜನೆಯಡಿ ಉಕ್ರೇನ್ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಸ್ಲೊವಾಕಿಯಾ, ಪೋಲೆಂಡ್ ಮತ್ತು ಹಂಗೇರಿಗಳಿಂದ ಭಾರತೀಯರನ್ನು ಈಗಾಗಲೇ ಸ್ವದೇಶಕ್ಕೆ ಕರೆತರಲಾಗುತ್ತಿದೆ. ಈಗ ಸುಮಿ ಮತ್ತು ಖಾರ್ಕೀವ್ ನಗರಗಳಿಂದ ರಷ್ಯಾ ಸೇನೆಯ ಮೂಲಕ ಮಾಸ್ಕೋಗೆ ಭಾರತೀಯರನ್ನು ಸ್ಥಳಾಂತರಿಸುವುದು, ಅಲ್ಲಿಂದ ಭಾರತೀಯರನ್ನು ವಾಯುಪಡೆ ವಿಮಾನದ ಮೂಲಕ ಕರೆತರುವುದು ಭಾರತದ ಉದ್ದೇಶ.