ಮದುವೆಯಾದ ಎರಡೇ ತಾಸಿನಲ್ಲಿ ಮುರಿದು ಬಿತ್ತು ಏಳು ಜನ್ಮದ ನಂಟು, ಹೊರಟೇ ಹೋದಳು ವಧು!

First Published Dec 3, 2020, 5:19 PM IST

ಮದುವೆಯಾಗಿ ಕೇವಲ ಎರಡೇ ತಾಸಾಗಿತ್ತು. ವಧು ಗಂಡನ ಮನೆಗೆ ತೆರಳಲು ಕಾರಿನಲ್ಲಿ ಕುಳಿತು ಹಳ್ಳಿಯ ಗಡಿಯಲ್ಲಿ ತನ್ನ ಗಂಡನಿಗಾಗಿ ಕಾಯುತ್ತಿದ್ದಳು. ಆದರೆ ಟಷ್ರಲ್ಲೇ ಆಕೆಗೆ ಸುದ್ದಿಯೊಂದು ಸಿಕ್ಕಿದ್ದು, ಇದಾದ ಬಳಿಕ ಅವರ ಮದುವೆಯೇ ಮುರಿದು ಬಿದ್ದಿದೆ. ಹಲವಾರು ಗಂಟೆ ಪಂಚಾಯತಿ ನಡೆದರೂ ಯಾವುದೇ ಪ್ರಯೋಜನ ಆಗಲಿಲ್ಲ. ಅಂತಿಮವಾಗಿ ಪೊಲೀಸರ ಸಮ್ಮುಖದಲ್ಲಿ ವರನ ಕಡೆಯವರು ವಧುವಿನ ಎಲ್ಲಾ ವಸ್ತುಗಳನ್ನು ಹಿಂತಿರುಗಿಸಿದ್ದಾರೆ. ಈ ಮೂಲಕ ವಧುವಿಲ್ಲದೇ ಗಂಡಿನ ಕಡೆಯವರು ತೆರಳಿದ್ದಾರೆ. ಇದು ಗೋರಖ್‌ಪುರದ ಹೆಮ್ಚಾಪರ್‌ನಲ್ಲಿ ನಡೆದಿದೆ.

ಹೆಮ್ಚಾಪರ್‌ನ ಭುವಾಲ್ ನಿಶಾದ್ ಮನೆಗೆ ಹೈದರ್‌ಗಂಜ್‌ನಿಂದ ಮದುವೆ ದಿಬ್ಬಣ ಬಂದಿತ್ತು. ಮದುವೆಯೂ ಅದ್ಧೂರಿಯಾಗಿ ನಡೆದಿತ್ತು ಬೆಳಗ್ಗೆ ವಧು ತನ್ನ ಗಂಡನ ಮನೆಗೆ ತೆರಳಲು ಸಜ್ಜಾಗಿದ್ದಳು.
undefined
ಹೀಗಿರುವಾಗ ವಧು ಹಳ್ಳಿಯ ಹೊರಗೆ ತೋಟವೊಂದರಲ್ಲಿ ಕಾರಿನಲ್ಲಿ ಕುಳಿತು ತನ್ನ ಗಂಡನಿಗಾಗಿ ಕಾಯುತ್ತಿದ್ದಳು. ಆದರೆ ಅತ್ತ ವರ ಪರ್‌ಛನ್ ಹೆಸರಿನ ಒಂದು ಶಾಸ್ತ್ರದಲ್ಲಿ ಭಾಗಿಯಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾನೆ. ಇದಾದ ಬಳಿಕ ಪರಿಸ್ಥಿತು ಬಿಗಡಾಯಿಸಿದೆ.
undefined
ಯುವತಿ ಕಡೆಯವರು ಹುಡುಗನಿಗೆ ಆರೋಗ್ಯ ಸಮಸ್ಯೆ ಇದೆ ಎಂಬ ಅನುಮಾನದ ಮೇರೆಗೆ ಆಕೆಯನ್ನು ಕಳುಹಿಸಿಕೊಡಲು ಹಿಂದೇಟು ಹಾಕಿದ್ದಾರೆ. ಹೀಗಿರುವಾಗ ಜಗಳವೇರ್ಪಟ್ಟಿದ್ದು, ಯುವತಿ ಕಡೆಯವರು ಹುಡುಗನ ಬಳಿ ತಾವು ಕೊಟ್ಟ ಎಲ್ಲಾ ಸಾಮಾಗ್ರಿಗಳನ್ನು ಹಿಂತಿರುಗಿಸುವಂತೆ ಬೇಡಿಕೆ ಇಟ್ಟಿದ್ದಾರೆ.
undefined
ಇದಾದ ಬಳಿಕ ನಡೆದ ರಾಜಿ ಸಂಧಾನದ ವೇಳೆಡ ವರನ ಕಡೆಯವರು ವೈದ್ಯಕೀಯ ಪರೀಕ್ಷೆ ಬೇಕಾದರೂ ನಡೆಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ವಧುವಿನ ಕಡೆಯವರು ಇದ್ಯಾವುದಕ್ಕೂ ಸಿದ್ಧರಿರಲಿಲ್ಲ.
undefined
ಘಟನೆಯ ಮಾಹಿತಿ ಪಡೆದು ಪೊಲೀಸರೂ ಸ್ಥಳಕ್ಕಾಗಮಿಸಿದ್ದದಾರೆ. ಆದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಯುವ ಯುವತಿ ಇಬ್ಬರೂ ಸಂಬಂಧ ಮುರಿದುಕೊಂಡಿದ್ದಾರೆ.
undefined
click me!