ಕೋವಿಡ್‌ ಸೆಂಟರ್‌ನಲ್ಲಿ ಬೆಂಕಿ, ಐವರು ಸಾವು: ಇಲ್ಲಿವೆ ಶಾಕಿಂಗ್ ಫೋಟೋಸ್

Published : Nov 27, 2020, 05:15 PM IST

ರಾಜ್‌ಕೋಟ್‌ನಲ್ಲಿ ಗುರುವಾರ ತಡೆರಾತ್ರಿ ಕೋವಿಡ್‌ ಕೇಂದ್ರವೊಂದರಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ನಡೆಯುತ್ತಿದ್ದ ವೇಳೆ ತೆಗೆದ ಫೋಟೋಗಳು ಸದ್ಯ ಲಭಿಸಿವೆ. ಆನಂದ್ ಬಂಗಲಾ ಚೌರಾಹಾದಲ್ಲಿರುವ ಶಿವಾನಂದ ಕೋವಿಡ್‌ ಸೆಂಟರ್‌ನಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿ 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. ಸಿಎಂ ವಿಜಯ್ ರೂಪಾನಿ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.  

PREV
18
ಕೋವಿಡ್‌ ಸೆಂಟರ್‌ನಲ್ಲಿ ಬೆಂಕಿ, ಐವರು ಸಾವು: ಇಲ್ಲಿವೆ ಶಾಕಿಂಗ್ ಫೋಟೋಸ್

ಈ ಘಟನೆ ಆಸ್ಪತ್ರೆಯ ಎರಡನೇ ಅಂತಸ್ತಿನಲ್ಲಿರುವ ಐಸಿಯು ವಾರ್ಡ್‌ನಲ್ಲಿ ಸಂಭವಿಸಿದೆ. ಮಾಹಿತಿ ಲಭಿಸುತ್ತಿದ್ದಂತೆಯೇ ಅನೇಕ ಮಂದಿ ರಕ್ಷಣೆಗೆ ಧಾವಿಸಿದ್ದಾರೆ. ರೋಗಿಗಳನ್ನು ಕಿಟಕಿ ಗಾಜು ಒಡೆದು ಹೊರಗೊಯ್ದಿದ್ದಾರೆ. ಹೀಗಿದ್ದರೂ ಅನೇಕ ಮಂದಿಗೆ ಸುಟ್ಟ ಗಾಯಗಳಾಗಿವೆ.

ಈ ಘಟನೆ ಆಸ್ಪತ್ರೆಯ ಎರಡನೇ ಅಂತಸ್ತಿನಲ್ಲಿರುವ ಐಸಿಯು ವಾರ್ಡ್‌ನಲ್ಲಿ ಸಂಭವಿಸಿದೆ. ಮಾಹಿತಿ ಲಭಿಸುತ್ತಿದ್ದಂತೆಯೇ ಅನೇಕ ಮಂದಿ ರಕ್ಷಣೆಗೆ ಧಾವಿಸಿದ್ದಾರೆ. ರೋಗಿಗಳನ್ನು ಕಿಟಕಿ ಗಾಜು ಒಡೆದು ಹೊರಗೊಯ್ದಿದ್ದಾರೆ. ಹೀಗಿದ್ದರೂ ಅನೇಕ ಮಂದಿಗೆ ಸುಟ್ಟ ಗಾಯಗಳಾಗಿವೆ.

28

ಅನೇಕ ರೋಗಿಗಳು ಹೊಗೆ ಹಾಗೂ ಆತಂಕದಿಂದ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಜನರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡೇ ತೆರಳಿದ್ದಾರೆ.

ಅನೇಕ ರೋಗಿಗಳು ಹೊಗೆ ಹಾಗೂ ಆತಂಕದಿಂದ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಜನರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡೇ ತೆರಳಿದ್ದಾರೆ.

38

ಅಗ್ನಿ ನರ್ತನ ಅದೆಷ್ಟು ತೀವ್ರವಾಗಿತ್ತೆಂದರೆ ತೀವ್ರ ನಿಗಾ ಘಟಕ ಸಂಪೂರ್ಣವಾಗಿ ಸುಟ್ಟಟು ಕರಕಲಾಗಿದೆ.

ಅಗ್ನಿ ನರ್ತನ ಅದೆಷ್ಟು ತೀವ್ರವಾಗಿತ್ತೆಂದರೆ ತೀವ್ರ ನಿಗಾ ಘಟಕ ಸಂಪೂರ್ಣವಾಗಿ ಸುಟ್ಟಟು ಕರಕಲಾಗಿದೆ.

48

ಅಲ್ಲಿನ ಭಯಾನಕತೆ ತಿಳಿಸುತ್ತದೆ ಈ ಫೋಟೋ

ಅಲ್ಲಿನ ಭಯಾನಕತೆ ತಿಳಿಸುತ್ತದೆ ಈ ಫೋಟೋ

58

ಚಿಕಿತ್ಸೆ ಪಡಯುತ್ತಿದ್ದವರಲ್ಲಿ ಅನೇಕ ಮಂದಿ ವೃದ್ಧರಿದ್ದರು, ಹೀಗಾಗಿ ಅಲ್ಲಿಂದ ತಕ್ಷಣ ಓಡಿ ಹೋಗಲಾಗದೇ ಸಿಲುಕಿಕೊಂಡಿದ್ದಾರೆ.

ಚಿಕಿತ್ಸೆ ಪಡಯುತ್ತಿದ್ದವರಲ್ಲಿ ಅನೇಕ ಮಂದಿ ವೃದ್ಧರಿದ್ದರು, ಹೀಗಾಗಿ ಅಲ್ಲಿಂದ ತಕ್ಷಣ ಓಡಿ ಹೋಗಲಾಗದೇ ಸಿಲುಕಿಕೊಂಡಿದ್ದಾರೆ.

68


ಘಟನೆ ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರೂ ಪರದಾಡಿದ್ದಾರೆ.


ಘಟನೆ ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರೂ ಪರದಾಡಿದ್ದಾರೆ.

78

ಅನೇಕ ಮಂದಿ ಕೊರೋನಾ ಸೋಂಕಿತರಿಗೆ  ಸುಟ್ಟ ಗಾಯಗಳಾಗಿವೆ. ಮಹಿಳೆಯೊಬ್ಬರನ್ನು ಹೊರ ಕರೆತರುತ್ತಿರುವ ರಕ್ಷಣಾ ಸಿಬ್ಬಂದಿ.

ಅನೇಕ ಮಂದಿ ಕೊರೋನಾ ಸೋಂಕಿತರಿಗೆ  ಸುಟ್ಟ ಗಾಯಗಳಾಗಿವೆ. ಮಹಿಳೆಯೊಬ್ಬರನ್ನು ಹೊರ ಕರೆತರುತ್ತಿರುವ ರಕ್ಷಣಾ ಸಿಬ್ಬಂದಿ.

88

ಘಟನಾ ಸ್ಥಳದಲ್ಲಿರುವ ರಕ್ಷಣಾ ಸಿಬ್ಬಂದಿ.

ಘಟನಾ ಸ್ಥಳದಲ್ಲಿರುವ ರಕ್ಷಣಾ ಸಿಬ್ಬಂದಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories