ಇಸ್ರೋದ ವಿಕ್ರಮ ಲ್ಯಾಂಡರ್ ಆಗಸ್ಟ್ 23, 2023 ರ ಸಂಜೆ 6.04ಕ್ಕೆ ಚಂದಿರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದೆ. ಪ್ರಧಾನಿ ಮೋದಿ ಈ ಕ್ಷಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕಣ್ತುಂಬಿಕೊಂಡು ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಿದ್ದರು. ಅಲ್ಲದೆ, ಮುಖ್ಯಸ್ಥ ಸೋಮನಾಥ ಅವರೊಂದಿಗೆ ದೂರವಾಣಿಯಲ್ಲೂ ಮಾತುಕತೆ ನಡೆಸಿದ್ದರು. ಆದರೂ, ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಆಗಸ್ಟ್ 26 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡಲಿದ್ದು, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.