ಇಂಡಿಯಾ ಗೇಟ್ನಿಂದ ರಾಷ್ಟ್ರಪತಿ ಭವನದವರೆಗಿನ ರಾಜಪಥ ಸಂಪೂರ್ಣವಾಗಿ ನವೀಕರಿಸಲಾಗಿದೆ. ಸೆಂಟ್ರಲ್ ವಿಸ್ತಾ ಯೋಜನೆಯಡಿ ಈ ರಾಜಪಥ ನವೀಕರಣಗೊಂಡಿದ್ದು ಸೆಪ್ಟೆಂಬರ್ 8 ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಅತ್ಯಾಕರ್ಷ ಉದ್ಯಾನವನ, ಕೆರೆ, ಕಾರಂಜಿ, ನಡೆದಾಡಲು ಪಥ ಸೇರಿದಂತೆ ಹಲವು ಸೌಲಭ್ಯಗಳು ನೂತನ ಸೆಂಟ್ರಲ್ ವಿಸ್ತಾ ಅವೆನ್ಯೂನಲ್ಲಿ ಲಭ್ಯವಿದೆ.