ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ, ಮೇಕೆಗಳನ್ನು ಕೊಂದ ಸೇಡಿಗಾಗಿ ಗ್ರಾಮಸ್ಥರು ಬೀದಿ ನಾಯಿಗಳಿಗೆ ವಿಷವಿಟ್ಟಿದ್ದಾರೆ. ಈ ವಿಷಾಹಾರ ಸೇವಿಸಿ ಸತ್ತ ನಾಯಿಗಳ ಶವವನ್ನು ತಿಂದ 25ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಹಿಮಾಲಯನ್ ಗ್ರೀಫನ್ ರಣಹದ್ದುಗಳು ಸಾವನ್ನಪ್ಪಿವೆ.
ಮನುಷ್ಯರು ಮಾಡುವ ಕೆಲವೊಂದು ಅವಾಂತರಗಳು ಇಡೀ ಪರಿಸರಕ್ಕೆ ದೊಡ್ಡ ಹಾನಿಯುಂಟು ಮಾಡುತ್ತದೆ. ಇದರಿಂದ ಮುಗ್ಧ ಜೀವಿಗಳು ಪ್ರಾಣ ಬಿಡುವಂತಾಗುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಮಾನವ ಮಾಡಿದ ಅವಾಂತರದಿಂದ ಹಲವು ಅಮೂಲ್ಯ ಹಾಗೂ ಅಪರೂಪದ ಪ್ರಾಣಿ ಪಕ್ಷಿಗಳು ಉಸಿರು ಚೆಲ್ಲಿವೆ. ಹಾಗಿದ್ದರೆ ಆಗಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ...
26
ಮೇಕೆಗಳ ಸಾಯಿಸಿದ್ದ ಬೀದಿನಾಯಿಗಳು
ನಾಯಿಗಳು ಆಡು ಮೇಕೆಗಳ ಮೇಲೆ ದಾಳಿ ಮಾಡಿ ಅವುಗಳನ್ನು ಸಾಯಿಸಿದವು ಎಂದು ಸಿಟ್ಟಿಗೆದ್ದ ಊರಿನ ಕೆಲ ಜನರು ಊರಿನಲ್ಲಿದ್ದ ಬೀದಿ ನಾಯಿಗಳಿಗೆ ವಿಷಾಹಾರ ವಿಟ್ಟಿದ್ದರು. ಈ ವಿಷಾಹಾರ ಸೇವಿಸಿದ ಬೀದಿನಾಯಿಗಳು ಸತ್ತು ಬಿದ್ದಿದ್ದು, ಇವುಗಳ ಶವವನ್ನು ರಣಹದ್ದುಗಳು ಸೇವಿಸಿದ್ದು, ಪರಿಣಾಮ 25ಕ್ಕೂ ಹೆಚ್ಚು ಹಿಮಾಲಯನ್ ಗ್ರೀಫನ್ ಜಾತಿಯ ರಣಹದ್ದುಗಳು ಸಾವನ್ನಪ್ಪಿವೆ.
36
ಬೀದಿನಾಯಿಗೆ ವಿಷವಿಟ್ಟಿದ ಗ್ರಾಮಸ್ಥರು
ಉತ್ತರ ಪ್ರದೇಶದ ಲಖೀಂಪುರ ಖೇರಿಯ ಸೇಮರಿಯಾ ಎಂಬ ಗ್ರಾಮದ ಬಹಾದ್ದೂರ್ ನಗರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮೀಣ ಪ್ರದೇಶದ ಸಣ್ಣದೊಂದು ವಿವಾದವೂ ಪರಿಸರಕ್ಕೆ ಮಾರಕವಾದಂತಹ ದುರಂತವಾಗಿ ಬದಲಾಗಿದೆ.
ಉತ್ತರ ಪ್ರದೇಶದ ಲಖೀಂಪುರ ಕೇರಿಯ ದುದ್ವಾ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಕೃಷಿ ಭೂಮಿಯಲ್ಲು 25ಕ್ಕೂ ಹೆಚ್ಚು ರಣಹದ್ದುಗಳು ಸತ್ತು ಬಿದ್ದಿವೆ ಎಂದು ವರದಿಯಾಗಿದೆ. ಹಕ್ಕಿಗಳು ಕೆಳಭಾಗದಲ್ಲಿ ಸುತ್ತುಹೊಡೆಯುತ್ತಾ ಕುಸಿದು ಬೀಳುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೆಲವು ಬೀದಿನಾಯಿಗಳು ಗುಂಪು ಕಟ್ಟಿಕೊಂಡು ಗ್ರಾಮದಲ್ಲಿ ಮೇಕೆಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿದ್ದವು.
56
ಬೀದಿನಾಯಿಗಳ ವಿಷಪೂರಿತ ಶವ ಸೇವಿಸಿದ್ದ ರಣಹದ್ದುಗಳು
ಮತ್ತೆ ಮತ್ತೆ ಇದೇ ರೀತಿಯ ಘಟನೆಗಳು ಸಂಭವಿಸಿದಾಗ ಮೇಕೆಗಳ ಮಾಲೀಕರು ಸಿಟ್ಟಾಗಿದ್ದಾರೆ. ಅವರಲ್ಲಿ ಯಾರೋ ಕೆಲವರು ಸತ್ತ ಮೇಕೆಗಳ ದೇಹಕ್ಕೆ ವಿಷಪ್ರಾಶನ ಮಾಡಿದ್ದು, ಇವುಗಳನ್ನು ನಾಯಿಗಳು ತಿಂದು ನಾಯಿಗಳು ಸಾವನ್ನಪ್ಪಿವೆ. ಕೆಲ ಅಂಗ್ಲ ಮಾಧ್ಯಮಗಳ ವರದಿಯ ಪ್ರಕಾರ, ಅನ್ನಕ್ಕೆ ಕೀಟನಾಶಕ ಮಿಕ್ಸ್ ಮಾಡಿ ಇಟ್ಟು ನಾಯಿಗಳನ್ನು ಸಾಯಿಸಲಾಗಿದೆ. ಈ ವಿಷಾಹಾರ ಸೇವಿಸಿದ ನಾಯಿಗಳು ಅಲ್ಲಲ್ಲಿ ಸತ್ತು ಬಿದ್ದಿದ್ದು, ಅವುಗಳ ಮಾಂಸವನ್ನು ರಣಹದ್ದುಗಳು ಸೇವಿಸುವುದಕ್ಕೆ ಆರಂಭಿಸಿವೆ.
66
25 ಅಪರೂಪದ ರಣಹದ್ದುಗಳ ದಾರುಣ ಸಾವು
ಪರಿಣಾಮವಾಗಿ ಅವುಗಳಿಗೆ ವಿಷಪ್ರಾಶನವಾಗಿದ್ದು, ಹಲವು ರಣಹದ್ದುಗಳು ಇಲ್ಲಿನ ಹೊಲ ಗದ್ದೆಗಳಲ್ಲಿ ಸತ್ತು ಬಿದ್ದಿವೆ. ಹೀಗೆ ಸಾವನ್ನಪ್ಪಿದ ಈ ಹಿಮಾಲಯನ್ ಗ್ರೀಫನ್ ರಣಹದ್ದುಗಳು ಅತೀ ಅಪರೂಪದ ರಣಹದ್ದುಗಳಾಗಿದ್ದು, ಅಳವಿನಂಚಿನಲ್ಲಿರುವ ಪ್ರಬೇಧಗಳಾಗಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಒಟ್ಟಿನಲ್ಲಿ ಮಾನವ ಮಾಡಿದ ಅವಾಂತರವೊಂದು ಹಲವು ಮುಗ್ಧ ಜೀವಿಗಳ ಪ್ರಾಣಕ್ಕೆ ಎರವಾಗಿದ್ದು, ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ