ಪ್ರಧಾನಿ ನರೇಂದ್ರ ಮೋದಿಯ ಆಡಳಿತ, ಜನಪ್ರಿಯತೆ ಮೆಚ್ಚಿ ಹಲವರು ಬೆಂಬಲಿಗರಾಗಿದ್ದಾರೆ. ಮತ್ತೆ ಕೆಲವರು ಮೋದಿ ಧೀರ್ಘಾಯುಷ್ಯಕ್ಕೆ ಪೂಜೆ, ಹೋಮಗಳನ್ನು ಮಾಡಿದ್ದಾರೆ. ಇದೀಗ ಆಂಧ್ರ ಪ್ರದೇಶ ರೈತ ನರಸಿಂಹ ಬದ್ವೇಲ್ ಗ್ರಾಮದಿಂದ ದೆಹಲಿಗೆ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ. ಕಾರಣ, ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ. ನವದೆಹಲಿಯಲ್ಲಿ ಮೋದಿ ಭೇಟಿಯಾಗಿ ಶುಭಕೋರಲು ರೈತ ನರಸಿಂಹ ಈ ಬೃಹತ್ ಯಾತ್ರೆ ಕೈಗೊಂಡಿದ್ದಾನೆ.