ಲಾಕ್‌ಡೌನ್ ನಡುವೆ ಹೀಗೆ ನಡೆಯಿತು ಸಿಎಂ ಯೋಗಿ ತಂದೆ ಅಂತಿಮ ಕ್ರಿಯೆ!

First Published Apr 21, 2020, 5:04 PM IST

ಮಂಗಳವಾರ ಬೆಳಗ್ಗೆ ಉತ್ತರಾಖಂಡ್‌ನ ಯಮಕೇಶ್ವರದ ಫೂಲ್‌ಚಟ್ಟೀ ರುದ್ರಭೂಮಿಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಂದೆ ಆನಂದ್ ಸಿಂಗ್ ವಿಷ್ಟ್ ಅಂತ್ಯಕ್ರಿಯೆ ನಡೆಯಿತು.ಸಿಎಂ ಯೋಗಿ ಹಿರಿಯ ಅಣ್ಣ ಮಾನೇಂದ್ರ ವಿಷ್ಟ್ ತಂದೆ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಈ ವೆಳೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ವಿಧಾನಸಭೆ ಅಧ್ಯಕ್ಷ ಪ್ರೇಮ್‌ಚಂದ್‌ ಅಗರ್ವಾಲ್, ಕ್ಯಾಬಿನೆಟ್ ಸಚಿವ ಮದನ್ ಕೌಶಿಕ್, ಸಂಸದ ತೀರಥ್ ಸಿಂಗ್ ರಾವತ್, ಬಾಬಾ ರಾಮ್‌ದೇವ್, ಸ್ವಾಮಿ ಚಿದಾನಂದ್ ಸರಸ್ವತಿ ಸೇರಿದಂತೆ ಅನೇಕ ಇನ್ನಿತರ ಗಣ್ಯರು ಹಾಜರಾಗಿದ್ದರು. ಲಾಕ್‌ಡೌನ್ ಹಿನ್ನೆಲೆ ಸಿಎಂ ಯೋಗಿ ಆದಿತ್ಯನಾಥ್ ಗೈರಾಗಿದ್ದು, ಲಾಕ್‌ಡೌನ್ ಅಂತ್ಯಗೊಂಡ ಬಳಿಕ ಮನೆಗೆ ಭೇಟಿ ನೀಡಲಿದ್ದಾರೆ.

ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಾತನಾಡುತ್ತಾ ಸಿಎಂ ಯೋಗಿ ತಂದೆ ಆನಂದ್ ಸಿಂಗ್ ರಾಜಕೀಯದಿಂದ ನಿವೃತ್ತಿ ಪಡೆದ ಬಳಿಕ ಯಾವತ್ತೂ ತಮ್ಮ ಹಳ್ಳಿಯ ಅಭಿವೃದ್ಧಿಗೆ ಶ್ರಮಿಸಿದ್ದರು. ಸರ್ಕಾರ ಅವರ ನೆನಪು ಯಾವತ್ತೂ ಉಳಿಯುವಂತೆ ಪ್ರಯತ್ನಿಸುತ್ತದೆ ಎಂದಿದ್ದಾರೆ.
undefined
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಂದೆ ಆನಂದ್ ಸಿಂಗ್ ಅಂತ್ಯಕ್ರಿಯೆಗೆ ಆಗಮಿಸಿದ್ದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಶ್ರದ್ಧಾಂಜಲಿ ಸಲ್ಲಿಸಿದರು.
undefined
ಆನಂದ್ ಸಿಂಗ್ ನಿಧನ ಸುದ್ದಿ ಬಂದ ಬಳಿಕ ಪಂಚೂರ್ ಸೇರಿ ಆಸುಪಾಸಿನ ಹಳ್ಳಿಗಳಲ್ಲಿ ಶೋಕ ಮಡುಗಟ್ಟಿತ್ತು. ತಡರಾತ್ರಿ ಹೊರಿಯ ಶಿಕ್ಷಣ ಸಚಿವ ಧನ್‌ ಸಿಂಗ್ ರಾವತ್ ಕೂಡಾ ಅಂತಿಮ ದರ್ಶನ ಪಡೆದಿದ್ದರು.
undefined
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ಯೋಗಿ ಆದಿತ್ಯನಾಥ್ ತಂದೆ 88 ವರ್ಷದ ಆನಂದ್ ಸಿಂಗ್ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದರು. ಏಮ್ಸ್‌ನಿಂದ ವಿಶೇಷ ಆಂಬುಲೆನ್ಸ್‌ನಲ್ಲಿ ಅವರ ಮೃತದೇಹವನ್ನು ಅವರ ಊರು ಪಂಚೂರ್‌ಗೆ ಕರೆತರಲಾಗಿತ್ತು.
undefined
ಲಿವರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಿಎಂ ಯೋಗಿ ತಂದೆ ಆನಂದ್ ಸಿಂಗ್ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಬಹು ಅಂಗಾಂಗ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಆನಂದ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು..
undefined
ಈ ಮಾಹಿತಿ ಸಿಕ್ಕ ಬೆನ್ನಲ್ಲೇ, ಉತ್ತರ ಪ್ರದೇಶದಲ್ಲಿ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಇರುವ ಹಿನ್ನೆಲೆ ನನ್ನ ಪೂರ್ವಾಶ್ರಮದ ತಂದೆ ಅಂತಿಮ ಕ್ರಿಯೆಗೆ ತೆರಳಲು ಸಾಧ್ಯವಿಲ್ಲ ಎಂದಿದ್ದ ಸಿಎಂ ಯೋಗಿ ಆದಿತ್ಯನಾಥ್, ಅಂತಿಮ ಕ್ರಿಯೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳಗ್ಳುವಂತೆ ಮನವಿ ಮಾಡಿದ್ದರು.
undefined
ತಂದೆಗೆ ಎರಡು ನಿಮಿಷ ಮೌನ ವಹಿಸಿ ಶ್ರದ್ಧಾಂಜಲಿ, ಮತ್ತೆ ಸಭೆ ಆರಂಭ; ಇನ್ನು ಸಿಎಂ ಯೋಗಿ ಆದಿತ್ಯನಾಥ್ ಮಂಗಳವಾರ ತಮ್ಮ ನಿವಾಸದಲ್ಲಿ ಕೋವಿಡ್ 19 ಟೀಂ 11 ಜೊತೆ ಸಭೆ ನಡೆಸಿದರು. ಈ ವೇಳೆ ಎರಡು ನಿಮಿಷದ ಮೌನಾಚರಣೆ ಮಾಡಿ ತಂದೆಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಮತ್ತೆ ಎಂದಿನಂತೆ ಕೆಲಸ ಆರಂಭಿಸಿದರು.
undefined
ಅರಣ್ಯ ವಿಭಾಗದಿಂದ ನಿವೃತ್ತರಾಗಿದ್ದರು: ಯೋಗಿ ಆದಿತ್ಯನಾಥ್ ತಂದೆ ಆನಂದ್ ಸಿಂಗ್ ಉತ್ತರಾಖಂಡ್ ಜಿಲ್ಲೆಯ ಯಮಕೇಶ್ವರ್‌ನ ಪಂಚೂರ್‌ ಹಳ್ಳಿಯ ನಿವಾಸಿಯಾಗಿದ್ದರು. ಅವರು ಅರಣ್ಯ ವಿಭಾಗದಲ್ಲಿ ರೇಂಜರ್ ಆಗಿದ್ದರು. 1991 ರಲ್ಲಿ ನಿವೃತ್ತರಾಗಿದ್ದರು.
undefined
ಆದಿತ್ಯನಾಥ್‌ರವರ ಪೂರ್ವಾಶ್ರದ ಹೆಸರು ಅಜಯ್ ಸಿಂಗ್ ವಿಷ್ಟ್. ಅವರು ಬಾಲ್ಯದಲ್ಲೇ ಕುಟುಂಬ ತೊರೆದಿದ್ದರು ಹಾಗೂ ಗೋರಖನಾಥ ಮಂದಿರದಲ್ಲಿ ಮಹಂತ ಹಾಗೂ ನಾಥ ಸಂಪ್ರದಾಯದ ಅವೇದ್ಯನಾಥರ ಬಳಿ ತೆರಳಿದರು. ಬಳಿಕ ಅವೇದ್ಯನಾಥರ ಸ್ಥಾನ ಪಡೆದುಕೊಂಡರು. ಆದಿತ್ಯನಾಥ್ ಚನಾವಣಾ ಸಂಬಂಧ ಉತ್ತರಾಖಂಡ್‌ಗೆ ಭೇಟಿ ನೀಡಿದ್ದರೆ, ಕುಟುಂಬ ಸದಸ್ಯರು ಭೇಟಿಯಾಗಲು ಬರುತ್ತಿದ್ದರು.
undefined
ಯೋಗ ಗುರು ಸ್ವಾಮಿ ಬಾಬಾ ರಾಮ್‌ದೇವ್ ಆನಂದ್ ಸಿಂಗ್ ಅಂತಿಮ ಕ್ರಿಯೆಯಲ್ಲಿ ವಿಧಿ ವಿಧಾನಗಳನ್ನು ಪಠಿಸಿದರು
undefined
ಬಳಿಕ ಯೋಗಿ ಆದಿತ್ಯನಾಥ್ ಹಿರಿಯ ಅಣ್ಣ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
undefined
click me!