Wayanad Landslide: ಚಿತ್ರಗಳಲ್ಲಿ ದೇವರನಾಡಿನ ಭೀಕರ ಭೂಕುಸಿತ!

Published : Jul 30, 2024, 12:39 PM IST

ದೇವರನಾಡು ಕೇರಳ ಭಾರೀ ಭೂಕುಸಿತಕ್ಕೆ ತುತ್ತಾಗಿದೆ. ವಯನಾಡ್‌ ಜಿಲ್ಲೆಯ ಮೂರು ಗ್ರಾಮಗಳು ಭೂಕುಸಿತದಿಂದ ಸಂಪೂರ್ಣವಾಗಿ ನಾಶವಾಗಿದ್ದು, ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ

PREV
116
Wayanad Landslide: ಚಿತ್ರಗಳಲ್ಲಿ ದೇವರನಾಡಿನ ಭೀಕರ ಭೂಕುಸಿತ!
wayanad landslide

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸರಣಿ ಭೂಕುಸಿತ ಸಂಭವಿಸಿದ್ದು, ಮಣ್ಣಿನಲ್ಲಿ ಗ್ರಾಮಗಳು ಹೂತುಹೋಗಿವೆ. ರಸ್ತೆಗಳು, ಸೇತುವೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ನದಿಗಳಲ್ಲಿ ಶವಗಳು ತೇಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

216
wayanad landslide

ನಿರ್ದಿಷ್ಟವಾಗಿ ಹೇಳುವುದಾದರೆ, ವಯನಾಡು ಜಿಲ್ಲೆಯ ಚೂರಲ್ಮಲಾ ಮತ್ತು ಮುಂಡಕೈ ಟೌನ್ ಪ್ರದೇಶಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ ಎಂದು ಹೇಳಲಾಗಿದೆ. ಮಂಗಳವಾರ ಬೆಳಿಗ್ಗೆ 11.30 ರ ಹೊತ್ತಿಗೆ ವಯನಾಡ್ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

316

ವಯನಾಡು ಪ್ರದೇಶಗಳಲ್ಲಿ ಒಂದೇ ದಿನದಲ್ಲಿ 300 ಮಿಮೀ ಮಳೆಯಾಗಿದ್ದು, ಪ್ರವಾಹ ಮತ್ತು ಭೂಕುಸಿತದಿಂದ ಈ ದುರಂತ ಸಂಭವಿಸಿದೆ. ವಯನಾಡ್ ಜಿಲ್ಲೆಯ ಮೆಪ್ಪಾಡಿ, ಮುಂಡಕ್ಕೈ ಪಟ್ಟಣ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಬೆಳಗಿನ ಜಾವ 2 ರಿಂದ 6 ರ ನಡುವಿನ ನಾಲ್ಕು ಗಂಟೆಗಳಲ್ಲಿ 3  ಭೂಕುಸಿತಗಳು ಸಂಭವಿಸಿವೆ.
 

416
landslide

ಮುಂಡಕೈ ಟೌನ್ ಪ್ರದೇಶದಲ್ಲಿ ಎರಡು ಬಾರಿ ಭೂಕುಸಿತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅದೇ ರೀತಿ ಚೂರಲ್ಮಲಾ ಗ್ರಾಮದ ಒಂದು ಭಾಗ ಭೂಕುಸಿತಕ್ಕೆ ಸಿಲುಕಿ ಸಂಪೂರ್ಣವಾಗಿ ನಾಶವಾಗಿದೆ.

516
wayanad landslide

ಚೂರಲ್ಮಲಾ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳು ಭೂಕುಸಿತಕ್ಕೆ ಸಿಲುಕಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

616
landslide

ವಯನಾಡ್‌ ಭೂಕುಸಿತದ ಪರಿಣಾಮ ಇನ್ನೂ ತಿಳಿದುಬಂದಿಲ್ಲ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ  ಅಧಿಕಾರಿಗಳು ತಿಳಿಸಿದ್ದಾರೆ.

716
landslide vilangad

ಅಲ್ಲಿರುವ ಸೇತುವೆಯೊಂದು ಸಂಪೂರ್ಣ ಹಾನಿಗೀಡಾಗಿರುವುದರಿಂದ ಹಾನಿಯನ್ನು ತಕ್ಷಣವೇ ನಿರ್ಣಯಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

816
waynad landslide

ಮುಂಡಕೈ ಪಟ್ಟಣವನ್ನು ಚೂರಲ್ಮಲಾ ಗ್ರಾಮದ ನಂತರ ಮಾತ್ರ ತಲುಪಬಹುದು. ಎರಡು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಭಾರೀ ಮಳೆ ಮತ್ತು ಭೂಕುಸಿತದಿಂದ ನಾಶವಾಗಿದೆ.

916
landslide 1

ಇದರಿಂದಾಗಿ ಮುಂಡಕ್ಕೈ ಟೌನ್‌ಗೆ ರಕ್ಷಣಾ ತಂಡ ತೆರಳುವುದು ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಕೂಡ ನಡೆದಿದೆ.

1016
wayanad landslide rescue

ಸೇತುವೆ ಸಂಪೂರ್ಣ ಹಾಳಾಗಿದ್ದು, ಮುಂಡಕೈ ಟೌನ್ ಸಂಪೂರ್ಣ ಅತಂತ್ರ ಪ್ರದೇಶವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ಗಳು ಕೂಡ ತಕ್ಷಣಕ್ಕೆ ಲ್ಯಾಂಡ್ ಆಗಲು ಸಾಧ್ಯವಾಗುತ್ತಿಲ್ಲ.

1116
landslide wayanad

ಮುಂಡಕೈ ಟೌನ್ ಪ್ರದೇಶದಲ್ಲಿ ಮುಂಜಾನೆ 3.15 ರ ಸುಮಾರಿಗೆ ಮತ್ತೆ ಭೂಕುಸಿತ ಸಂಭವಿಸಿದೆ. ಪುಣಿಚಿರಿಮಟ್ಟಂ ಪ್ರದೇಶದ ನೂರಾರು ಜನರ ಸ್ಥಿತಿ ಏನಾಗಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

1216

ಮುಂಡಕ್ಕೈ ಟೌನ್ ಒಂದರಲ್ಲೇ ಸುಮಾರು 100 ಮನೆಗಳು ಭೂಕುಸಿತದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಲಾಗಿದೆ.

1316
wayanad lanslide

ಮುಂಡಕೈ ಪಟ್ಟಣದ ಪಕ್ಕದ ಅಟ್ಟಮಲೈ ಗ್ರಾಮದಲ್ಲಿ ಹರಿಯುವ ನದಿಯಲ್ಲಿ ಆರು ಮೃತದೇಹಗಳನ್ನು ಗ್ರಾಮಸ್ಥರು ಹೊರತೆಗೆದಿದ್ದಾರೆ. ಇವು ಮುಂಡಕ್ಕೈ ಟೌನ್‌ನಲ್ಲಿ ಭೂಕುಸಿತದಲ್ಲಿ ಮೃತಪಟ್ಟವರ ಶವಗಳು ಎಂದು ಹೇಳಲಾಗುತ್ತಿದೆ.

1416

ಮೆಪ್ಪಾಡಿ ಪ್ರದೇಶದಿಂದ ಹುಟ್ಟುವ ನದಿಯ ಹೆಸರು ಸಾಲಿಯಾರು. ಮೆಪ್ಪಾಡಿಯಲ್ಲಿ ಭೂಕುಸಿತದಿಂದ ಹೊರಬರುವ ನೀರು ಹಾಗೂ ಮಣ್ಣು ನದಿಗೆ ಸೇರುತ್ತಿದ್ದು, ಸಾಲಿಯಾರು ವೀಕ್ಷಿಸಲು ಅಪಾಯಕಾರಿಯಾಗಿದೆ ಎಂದು ಆ ಭಾಗದ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

1516

ಎಂಟು ಮೀಟರ್ ಉದ್ದದ ಅಟ್ಟಮಲೈ ಗ್ರಾಮದ ನದಿಯು ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದು, ಮುಂಡಕೈ ಟೌನ್‌ನಲ್ಲಿ ಸಾವನ್ನಪ್ಪಿದವರ ಮೃತದೇಹಗಳು ನದಿಯಲ್ಲಿ ಪತ್ತೆಯಾಗುತ್ತಿವೆ.

1616

ಭಾರತೀಯ ಸೇನೆ ಕಣ್ಣೂರಿನಿಂದ ರಕ್ಷಣೆಗೆ ಧಾವಿಸಿದೆ. ಅದೇ ರೀತಿ ತಮಿಳುನಾಡಿನ ಕುನ್ನೂರಿನ ಯೋಧರು ರಕ್ಷಣೆಗೆ ಧಾವಿಸಿದ್ದಾರೆ. ಭೂಕುಸಿತ ಪೀಡಿತ ಪ್ರದೇಶಗಳಲ್ಲಿ 400ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆಯಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Read more Photos on
click me!

Recommended Stories