ರೌನಕ್ ಗುರ್ಜರ್ ಜೈಲಿಗೆ ಹೋದ ನಂತರ ಮನಸು ಬದಲಾವಣೆಯಾಗಿದೆ. ರಾಮಾಯಣದಿಂದ ಸ್ಫೂರ್ತಿ ಸಿಕ್ಕಿದೆ. ತನ್ನ ಪಾಪ ಕರ್ಮಗಳು ಕೊನೆಯಾಗಲಿ ಎಂದು ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿ ತಾಯಿಗೆ ನೀಡಿದ್ದಾನೆ.
ರೌನಕ್ ಗುರ್ಜರ್ ಜೈಲಿಗೆ ಹೋದ ನಂತರ ಮನಸು ಬದಲಾವಣೆಯಾಗಿದೆ. ರಾಮಾಯಣದಿಂದ ಸ್ಫೂರ್ತಿ ಸಿಕ್ಕಿದೆ. ತನ್ನ ಪಾಪ ಕರ್ಮಗಳು ಕೊನೆಯಾಗಲಿ ಎಂದು ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿ ತಾಯಿಗೆ ನೀಡಿದ್ದಾನೆ.
ರೌನಕ್ ಗುರ್ಜರ್ ಅವರನ್ನ ಅಂಬುಲೆನ್ಸ್ನಲ್ಲಿ ಕರೆದುಕೊಂಡು ಬಂದಾಗ ಏನೋ ಆಗಿದೆ ಆತಂಕ ವ್ಯಕ್ತಪಡಿಸಿದ್ದರು. ತಾಯಿಗೆ ಚರ್ಮದ ಪಾದರಕ್ಷೆ ನೀಡಿದಾಗ ಮತ್ತು ಅದು ಮಗನ ತೊಡೆಯ ಚರ್ಮದಿಂದ ಮಾಡಿದ್ದು ಎಂದು ತಿಳಿದಾಗ ನೆರೆದಿದ್ದವರೆಲ್ಲ ಹೊಗಳಲಾರಂಭಿಸಿದರು. ಆದರೆ ತಾಯಿ ಮಾತ್ರ ಮಗನ ಕಂಡು ಕಣ್ಣೀರು ಹಾಕಿ ಬಾಚಿ ತಬ್ಬಿಕೊಂಡಳು. 'ನನ್ನ ಮಗ ರಾಮಭಕ್ತ. ದೇವರು ಅವನ ದುಃಖವೆಲ್ಲ ನನ್ನ ಮಡಿಲಲ್ಲಿ ಇಡಲಿ' ಎಂದು ಮಗನನ್ನ ತಬ್ಬಿಕೊಂಡು ಕಣ್ಣೀರು ಹಾಕಿದ ತಾಯಿ.