ಕಂಗಾನ ಹೇಳಿದ್ದೇನು?
‘India' ಅನ್ನೋ ಪದಕ್ಕೆ ಅರ್ಥಾನೇ ಇಲ್ಲ. ನಾವು 'ಭಾರತೀಯರು’ ಹೀಗೆ ಕರೆದುಕೊಳ್ಳುವುದರಲ್ಲೆ ಹೆಮ್ಮೆ, ಅರ್ಥವಿದೆ ಎಂದಿದ್ದಾರೆ. ಇದೀಗ ಇಂಡಿಯಾದಿಂದ ಭಾರತವಾಗಿ ಹೆಸರು ಬದಲಾಯಿಸಲು ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ.
'India' ಹೆಸರಿನಲ್ಲಿ ಪ್ರೀತಿಸೋದಕ್ಕೆ ಏನಿದೆ ಎಂದು ಪ್ರಶ್ನಿಸಿರುವ ಕಂಗನಾ, ಮೊದಲನೆದಾಗಿ ಬ್ರಿಟಿಷರಿಗೆ 'ಸಿಂಧು' ಎನ್ನುವ ಪದದ ಉಚ್ಚಾರಣೆಯೇ ಸರಿಯಾಗಿ ಬರುತ್ತಿರಲಿಲ್ಲ. ಹಾಗಾಗಿ ಬ್ರಿಟಿಷರು ಸಿಂಧು ಬದಲಿಗೆ 'ಇಂಡಸ್' ಎಂದರು. ಬಳಿಕ 'ಹಿಂದೋಸ್' ಎಂದರು. ಅದೇ ರೂಢಿಯಾಗಿ ಇಂಡಿಯಾ ಆಗಿದೆ. ಆದರೆ ನಮ್ಮ ದೇಶದ ಇತಿಹಾಸ ನೋಡಿದಾಗ, ಕುರುಕ್ಷೇತ್ರದಲ್ಲಿ ಭಾಗವಹಿಸಿದ ಎಲ್ಲ ರಾಜ್ಯಗಳು ಭಾರತ ಎಂಬ ಖಂಡದ ಅಡಿಯಲ್ಲೇ ಬಂದವು. ಆಗ ಇಂಡಿಯಾ ಎಲ್ಲಿತ್ತು? ಭಾರತ್ ಹೆಸರೇ ಅರ್ಥಪೂರ್ಣವಾಗಿದೆ "ಇಂಡಿಯಾ'ಅಂತ ಕರೆಯುವುದು ಗುಲಾಮಗಿರಿಯ ಸಂಕೇತ. ನಾವು ಗುಲಾಮರಲ್ಲ, ಭಾರತೀಯರು ಎಂದಿದ್ದಾರೆ.