ಕಾಲಚಕ್ರದ ಉರುಳಲ್ಲಿ ರಾಮಮಂದಿರದ ಹೆಜ್ಜೆ ಗುರುತುಗಳು!
First Published Aug 3, 2020, 6:18 PM ISTರಾಮ ಜನ್ಮಭೂಮಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಎಲ್ಲಾ ವಿವಾದಗಳಿಗೆ ತೆರೆ ಎಳೆದಿತ್ತು. ಇದೀಗ ಈ ವಿವಾದ ಅಂತ್ಯಗೊಂಡ ಬೆನ್ನಲ್ಲೇ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲು ತಯಾರಿ ನಡಡೆಯುತ್ತಿದ್ದು, ಆಗಸ್ಟ್ 5ರಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಡೆಸಿ ಶಂಕು ಸ್ಥಾಪನೆ ಮಾಡಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದು, ಇಡೀ ದೇಶದ ಚಿತ್ತ ಸದ್ಯ ಅಯೋಧ್ಯೆ ಮೇಲಿದೆ. ಆದರೆ ಈ ರಾಮ ಮಂದಿರದ ಶಿಲಾನ್ಯಾಸ ನೆರವೇರಲು ಹಲವು ವರ್ಷಗಳ ಹೋರಾಟವೇ ನಡೆದಿದೆ. ಭೂಮಿ ಪೂಜೆ ನಡೆಯುವ ಈ ಸಂದರ್ಭದಲ್ಲಿ ರಾಮ ಮಂದಿರಕ್ಕಾಗಿ ನಡೆದ ಹೋರಾಟದ ಒಂದು ನೋಟ ಇಲ್ಲಿದೆ.