ರಾತ್ರಿ ಆರಾಮಾಗಿ ಮಲಗಿತ್ತು ಕುಟುಂಬ, ಬೆಳಗೆದ್ದಾಗ ಕಾದಿತ್ತು ಆಘಾತ!
First Published Aug 1, 2020, 9:59 PM ISTದೇವರಭೂಮಿ ಉತ್ತರಖಂಡದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಶುಕ್ರವಾರ ತಡರಾತ್ರಿ ಹರಿದ್ವಾರದಲ್ಲಿ ಸುರಿದ ಭಾರೀ ಮಳೆಯಿಂದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಭಾರೀ ನಷ್ಟ ಸಂಭವಿಸಿದೆ. ಇನ್ನು ಈ ಸಂಬಂಧ ತಮ್ಮ ನೋವು ತೋಡಿಕೊಂಡಿರುವ ಸ್ಥಳೀಯರು ನಾವು ರಾಥ್ರಿ ನಿಶ್ಚಿಂತೆಯಾಗಿ ಮಲಗಿದ್ದೆವು ಆದರೆ ಎಚ್ಚರವಾದಾಗ ಸುತ್ತಲೂ ನೀರು ತುಂಬಿಕೊಂಡಿತ್ತು ಎಂದಿದ್ದಾರೆ. ಫೋಟೋಗಳು ವೈರಲ್ ಆಗಿದ್ದು, ಇದರಲ್ಲಿ ಮನೆಯೊಳಗಿರುವ ವಸ್ತುಗಳು ತೇಲುತ್ತಿರುವುದನ್ನು ನೋಡಬಹುದು.