ಹಿಮದ ಹೊದಿಕೆ ಹೊತ್ತ ಕಣಿವೆ ನಾಡು, ಭೂಮಿ ಮೇಲಿನ ಸ್ವರ್ಗದಂತಾದ ಗಡಿ ಪ್ರದೇಶ!
First Published Dec 12, 2020, 5:10 PM ISTಜಮ್ಮು ಕಾಶ್ಮೀರದಲ್ಲಿ ಶನಿವಾರದಂದು ಚಳಿಗಾಲದ ಮೊದಲ ಮಂಜು ಸುರಿದಿದೆ. ಶ್ರೀನಗರವಂತೂ ದಪ್ಪಗಿನ ಹಿಮದ ಹೊದಿಕೆಯಿಂದ ಮುಚ್ಚಿದೆ. ಇದರಿಂದಾಗಿ ಕಣಿವೆ ನಾಡಿನಲ್ಲಿ ಚಳಿ ತೀವ್ರತೆಯೂ ಹೆಚ್ಚಿದೆ. ಕಾಶ್ಮೀರದ ಗುಲ್ಮರ್ಗ್ ಹಾಗೂ ಪಹಲ್ಗಾಮ್ನಲ್ಲಿ ತಾಪಮಾನ ಶೂನ್ಯಕ್ಕಿಂತ ಕೆಳಗಿಳಿದಿದೆ. ಅತ್ತ ಹಿಮಾಚಲದ ಲಾಹೌಲ್ ಸ್ಪೀತಿಯಲ್ಲೂ ಮಂಜು ಸುರಿದಿದೆ. ಫೋಟೋಗಳಲ್ಲಿ ನೀವೇ ನೋಡಿ ಭೂಮಿ ಮೇಲಿನ ಸ್ವರ್ಗದಂತಿರುವ ಗಡಿ ಪ್ರದೇಶದ ಮನಮೋಹಕ ದೃಶ್ಯ