ಬಡತನ ಕಾರಣಕ್ಕೆ ಶಾಲೆ ಬಿಟ್ಟಿದ್ದ 'ಟೀ ಕಪ್ ಹಿಡಿದು ನಗುವ' ವೈರಲ್ ಹುಡುಗ; ಒಂದು ವಿಡಿಯೋದಿಂದ ಜೀವನ ಬದಲಾಯ್ತು!

Published : Jun 10, 2026, 08:35 PM IST

ಸಾಮಾಜಿಕ ಜಾಲತಾಣದಲ್ಲಿ ಚಹಾ ಕಪ್ ಹಿಡಿದು ನಗುವ ವಿಡಿಯೋ ಮೂಲಕ ವೈರಲ್ ಆಗಿದ್ದ ಹುಡುಗನ ಬದುಕು ಈಗ ಬದಲಾಗಿದೆ. ಬಡತನದಿಂದ ಶಾಲೆ ಬಿಟ್ಟಿದ್ದ ಈ ಬಾಲಕ ಈಗ ಹತ್ತನೇ ತರಗತಿ ಪಾಸಾಗಿ ಲಕ್ಷಾಂತರ ಜನರಿಗೆ ಮಾದರಿಯಾಗಿದ್ದಾನೆ. ಏನಿದು ಅಸಲಿ ಕಹಾನಿ ಓದಿ.

PREV
16

ಸಾಮಾಜಿಕ ಜಾಲತಾಣದಲ್ಲಿ ಚಹಾ ಕಪ್ ಹಿಡಿದು ನಗುತ್ತಲೇ ಕೈ ಸುಟ್ಟುಕೊಂಡು ಚಹಾವನ್ನು ಮತ್ತೊಂದು ಕೈಗೆ ಬದಲಾಯಿಸುವ ಬಡ ಹುಡುಗನ ವಿಡಿಯೋವನ್ನು ನೀವು ಎಲ್ಲೆಡೆ ನೋಡಿರುತ್ತೀರಿ. ಆದರೆ, ಈ ನಗುವ ಹುಡುಗನ ನಿಜ ಜೀವನದಲ್ಲಿ ಭಾರೀ ಕಷ್ಟವಿದೆ. ಕುಟುಂಬಕ್ಕಾಗಿ ಓದು ಅರ್ಧಕ್ಕೆ ನಿಲ್ಲಿಸಿದ ಈ ಬಾಲಕ, ಒಂದೇ ಒಂದು ವಿಡಿಯೋದಿಂದಾಗ ಆತನ ಜೀವನವೇ ಬದಲಾಗಿರುವ ಘಟನೆ ನಡೆದಿದೆ.

26

ಬಡತನ ಎಂಬುದು ಕೇವಲ ಹೊಟ್ಟೆ ಹಸಿವನ್ನಷ್ಟೇ ಹೆಚ್ಚಿಸುವುದಿಲ್ಲ, ಅದು ಕಾಣುವ ಸುಂದರ ಕನಸುಗಳನ್ನೂ ಚಿವುಟಿ ಹಾಕುತ್ತದೆ. ಆದರೆ, ದೃಢ ಸಂಕಲ್ಪ ಮತ್ತು ಅದೃಷ್ಟ ಕೈಜೋಡಿಸಿದರೆ ಎಂತಹ ಕಠಿಣ ಹಾದಿಯನ್ನೂ ಸುಗಮಗೊಳಿಸಬಹುದು ಎಂಬುದಕ್ಕೆ ಈ ಅರುಣ್ ಎಂಬ ಬಾಲಕನೇ ಸಾಕ್ಷಿ. ಹಣಕಾಸಿನ ಮುಗ್ಗಟ್ಟಿನಿಂದಾಗಿ ಶಾಲೆಯಿಂದ ಹೊರಗುಳಿದಿದ್ದ ಈ ಬಾಲಕ, ಇಂದು 10ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದುವ ಮೂಲಕ ಹೊಸ ಇತಿಹಾಸ ಬರೆದಿದ್ದಾನೆ. 

ಅರುಣ್ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ 2 ವರ್ಷ ಕಳೆದರೂ ಆತನ ಪಾಸ್ ಆಗುವ ಹಿಂದಿದ್ದ ಒಂದು ವಿಡಿಯೋ ಕಥೆ ಇದೀಗ ರಿವೀಲ್ ಆಗಿದೆ.

36

ಅರುಣ್ ಬದುಕಿನಲ್ಲಿ ಪವಾಡ ಮಾಡಿದ ವೈರಲ್ ವಿಡಿಯೋ:

ಒಂದಾನೊಂದು ಕಾಲದಲ್ಲಿ ಅರುಣ್ ಬಡತನದ ಬೇಗೆಯಿಂದಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಶಾಲೆಗೆ ಹೋಗಬೇಕಿದ್ದ ವಯಸ್ಸಿನಲ್ಲಿ ಕುಟುಂಬಕ್ಕೆ ಆಧಾರವಾಗಲು ಕೆಲಸಕ್ಕೆ ಸೇರಿದ್ದ. ಆದರೆ, ಈತನ ಅಸಹಾಯಕತೆ ಮತ್ತು ಕಲಿಯುವ ಹಂಬಲದ ಬಗ್ಗೆ ತಯಾರಾದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋ ಅರುಣ್‌ನ ಜೀವನದ ದಿಕ್ಕನ್ನೇ ಬದಲಿಸಿತು. ಆ ವಿಡಿಯೋ ನೋಡಿದ ನೆಟ್ಟಿಗರು ಮತ್ತು ದಾನಿಗಳು ಆತನ ಸಹಾಯಕ್ಕೆ ಧಾವಿಸಿದರು.

46

ದಾನಿಗಳಿಂದ ಆರ್ಥಿಕ ಸಹಾಯ ಬರುತ್ತಿದ್ದಂತೆ ಕಮರಿ ಹೋಗಿದ್ದ ಕನಸುಗಳಿಗೆ ಮತ್ತೆ ರೆಕ್ಕೆ-ಪುಕ್ಕ ಬಂದವು. ಜನರ ಪ್ರೋತ್ಸಾಹ ಮತ್ತು ಸರ್ಕಾರದ ನೆರವಿನಿಂದ ಅರುಣ್ ಮತ್ತೆ ಶಾಲೆಯ ಮೆಟ್ಟಿಲು ಹತ್ತಿದ. ಕಳೆದ ಕೆಲವು ವರ್ಷಗಳಿಂದ ಹಗಲಿರುಳು ಶ್ರಮವಹಿಸಿ ಓದಿದ ಈತ, ಈಗ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಈ ಮೂಲಕ ತನ್ನ ಓದಿನ ಕನಸನ್ನು ನನಸು ಮಾಡಿಕೊಂಡು ಯಶಸ್ಸನ್ನೂ ಸಾಧಿಸಿದ್ದಾನೆ.

56

ಲಕ್ಷಾಂತರ ಜನರಿಗೆ ಸ್ಫೂರ್ತಿ:

ಅರುಣ್ ಸಾಧನೆ ಇಂದು ಕೇವಲ ವೈಯಕ್ತಿಕ ಯಶಸ್ಸಲ್ಲ, ಅದು ಬಡತನದ ವಿರುದ್ಧ ಹೋರಾಡುತ್ತಿರುವ ಸಾವಿರಾರು ಮಕ್ಕಳಿಗೆ ಭರವಸೆಯ ಕಿರಣವಾಗಿದೆ. 'ನನಗೆ ಸಿಕ್ಕ ಅವಕಾಶವನ್ನು ನಾನು ವ್ಯರ್ಥ ಮಾಡಬಾರದು ಎಂದು ನಿರ್ಧರಿಸಿದ್ದೆ. ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು' ಎಂದು ಅರುಣ್ ಸಂಭ್ರಮ ಹಂಚಿಕೊಂಡಿದ್ದಾನೆ.

66

ಒಂದು ಸಣ್ಣ ವಿಡಿಯೋ ಅರುಣ್‌ನಂತಹ ಎಷ್ಟೋ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ನ್ಯಾಯ ಕೊಡಿಸಬಲ್ಲದು ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಅರುಣ್‌ನ ಈ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories