'ಈಗೇಕೆ ಹತ್ರಾಸ್‌ನ್ನು ಪಾಕಿಸ್ತಾನ ಎನ್ನಲ್ಲ, ಮಹಿಳಾವಾದಿಗಳು ಎಲ್ಲಿದ್ದಾರೆ?'

First Published Oct 5, 2020, 5:37 PM IST

ಮುಂಬೈ. 05)  ನಟಿ ಕಂಗನಾ ರಣಾವತ್ ಮತ್ತು ಬಿಜೆಪಿ ವಿರುದ್ಧ ಶಿವಸೇನೆ ಸಂಸದ ಸಂಜಯ್ ರಾವತ್ ಮತ್ತೆ ಕಿಡಿಕಾರಿದ್ದಾರೆ.  ಈ ಬಾರಿ ಹತ್ರಾಸ್ ಪ್ರಕರಣ ಇಟ್ಟುಕೊಂಡು ಪರೋಕ್ಷವಾಗಿ ಕಂಗನಾ ಅವರಿಗೆ ಟಾಂಗ್ ನೀಡಿದ್ದಾರೆ.

ಹತ್ರಾಸ್ ಪ್ರಕರಣ ಮತ್ತು ಪಾಕಿಸ್ತಾನದಲ್ಲಿ ಹಿಂದೂ ಯುವತಿಯರ ಮೇಲೆ ಅತ್ಯಾಚಾರ ನಡೆದ ವರದಿಗಳು ಆಗಿವೆ. ಆದರೆ ಯಾರೊಬ್ಬರು ಹತ್ರಾಸ್ ಅನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿಲ್ಲ ಎಂದಿದ್ದಾರೆ. ಹತ್ರಾಸ್ ಸಂಸ್ತಸ್ತೆ ಒಬ್ಬಳು ಸ್ಟಾರ್ ಅಲ್ಲ ಆಕೆ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದಳು.
undefined
ಸುಶಾಂತ್ ಸಿಂಗ್ ಪ್ರಕರಣ ಮತ್ತು ಬಾಲಿವುಡ್ ಡ್ರಗ್ಸ್ ವಿಚಾರದಲ್ಲಿ ಮಾತನಾಡಿದ್ದ ಕಂಗನಾ ಹಿಂದೊಮ್ಮೆ ಮುಂಬೈನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆದಿದ್ದರು.
undefined
ಶಿವಸೇನೆ ಮುಖವಾಣಿ ಸಮನ್ನಾದಲ್ಲಿ ವಾರದ ಕಾಲಂ ಬರೆಯುವ ರಾವತ್, ಅಕ್ರಮ ಕಟ್ಟಡ ನೆಲಸ ಮಾಡಿದಕ್ಕೆ ಪ್ರತಿಭಟನೆ ತೋರಿದ ಜನರು ಈಗ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನು ಕುಟುಂಬಕ್ಕೆ ಗೊತ್ತಿಲ್ಲದ ಹಾಗೆ ಮಾಡಿದ್ದರೂ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
undefined
ಹಿಂದೂ ಯುವತಿಯರನ್ನು ಪಾಕಿಸ್ತಾನದಲ್ಲಿ ಅಪಹರಣ ಮಾಡಿ ಅತ್ಯಾಚಾರ ಎಸಗುವ ಪ್ರಕರಣ ವರದಿಯಾಗುತ್ತಿದ್ದು ಯಾರೂ ಕೂಡ ಹತ್ರಾಸ್ ಅನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿಲ್ಲ ಎಂದು ಕೇಳಿದ್ದಾರೆ.
undefined
ಮುಂಬೈನಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾದ ಕಚೇರಿಯನ್ನು ನೆಲಸಮಗೊಳಿಸಿದ ನಂತರ ಮಹಿಳೆಯರ ವಿರುದ್ಧದ ಅನ್ಯಾಯ ಮತ್ತು ದೌರ್ಜನ್ಯದ ಬಗ್ಗೆ ಮಾತನಾಡಿದವರು ಈಗ ಎಲ್ಲಿದ್ದಾರೆ ಎಂಬುದು ರಾವತ್ ಪ್ರಶ್ನೆ.
undefined
ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಮತ್ತು ಯುಕೆಯ 30 ಮಹಿಳಾ ಸಂಘಟನೆಗಳು ಬೌದ್ಧ ಸೊಸೈಟಿ ಆಫ್ ಇಂಡಿಯಾ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿವೆ. ಪ್ರಧಾನಿ ನರೇಂದ್ರ ಮೋದಿ ಯೋಗಿ ಆದಿತ್ಯನಾಥ್ ಅವರ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಕೇಳಿವೆ.
undefined
click me!