ಆಂಧ್ರಪ್ರದೇಶದ ಕಡಪದಲ್ಲಿ ಅಣೆಕಟ್ಟು ಒಡೆದು ಪ್ರವಾಹದಲ್ಲಿ ಮುಳುಗಿದ ಬಸ್. ಬಸ್ನಲ್ಲಿ 50 ಪ್ರಯಾಣಿಕರಿದ್ದು, ಹೆಚ್ಚಿನವರನ್ನು ರಕ್ಷಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಮಳೆ ಸಂಬಂಧಿತ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ. ಧಾರಾಕಾರ ಮಳೆಯಿಂದಾಗಿ ದೇವಾಲಯಗಳ ನಗರವಾದ ತಿರುಪತಿಯಲ್ಲಿ ರಸ್ತೆಗಳಲ್ಲಿ ನೀರು ಹರಿಯಲಾರಂಭಿಸಿತು. ಇದರಿಂದ ಭಕ್ತರು ಸಿಕ್ಕಿಬಿದ್ದರು.