ರೈತರ ಪ್ರತಿಭಟನೆ; ಬಿಜೆಪಿ ಸಂಸದ ಸನ್ನಿ ಕೊಟ್ಟ ಅದ್ಭುತ ಪ್ರತಿಕ್ರಿಯೆ

First Published Dec 7, 2020, 3:24 PM IST

ನವದೆಹಲಿ ( ಡಿ. 06 )  ರಾಷ್ಟ್ರ ರಾಜಧಾನಿ ದೆಹಲಿ ಸುತ್ತ ಮುತ್ತ ರೈತರ ಪ್ರತಿಭಟನೆ ನಡೆಯುತ್ತಲೆ ಇದೆ. ಕೃಷಿ ಕಾಯ್ದೆ ಮತ್ತು ಎಪಿಎಂಸಿ ಬಿಲ್ ವಿರೋಧಿಸಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ  ನಡೆಸುತ್ತಿದ್ದು  ಬಿಜೆಪಿ ಸಂಸದ, ಬಾಲಿವುಡ್ ನಟ ಸನ್ನಿ ಡಿಯೋಲ್ ಪ್ರತಿಕ್ರಿಯೆ ನೀಡಿದ್ದಾರೆ.

ಡಿಯೋಲ್ ಬಿಜೆಪಿ ಮತ್ತು ರೈತರು ಇಬ್ಬರನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ.
undefined
ಗುರುದಾಸಪುರದ ಸಂಸದ ತಮ್ಮ ಪಕ್ಷ ಹಾಗೂ ರೈತರು ಇಬ್ಬರ ಪರವಾಗಿಯೂ ಮಾತನಾಡಿದ್ದಾರೆ.
undefined
ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಸದಾ ರೈತರ ಹಿತ ಕಾಯುವ ಕೆಲಸವನ್ನೇ ಮಾಡಿಕೊಂಡು ಬಂದಿದ್ದಾರೆ ಎಂದಿದ್ದಾರೆ.
undefined
ಲೋಕಸಭಾ ಚುನಾವಣೆ ವೇಳೆ ನನ್ನ ಜತೆ ಬೆಂಬಲಕ್ಕೆ ನಿಂತಿದ್ದ ಹೋರಾಟಗಾರ ದೀಪ್ ಸಿಧು ಈಗ ರೈತರ ಜತೆ ಕಾಣಿಸಿಕೊಂಡಿದ್ದಾರೆ ಎನ್ನುತ್ತ ಅವರೊಂದಿಗೆ ಅಂತರ ಕಾಯ್ದುಕೊಳ್ಳುವ ಮಾತನ್ನು ಡಿಯೋಲ್ ಆಡಿದ್ದಾರೆ.
undefined
ಕೆಲವರು ಇದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
undefined
ಇಡೀ ಜಗತ್ತೇ ರೈತರು ಮತ್ತು ಕೇಂದ್ರ ಸರ್ಕಾರದ ಮಧ್ಯೆ ಬರುವ ಮಾತನಾಡುತ್ತಿದೆ. ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಈ ವಿಚಾರವನ್ನು ರೈತರು ಮತ್ತು ಸರ್ಕಾರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿದ್ದಾರೆ. ಯಾರೂ ಮಧ್ಯೆ ಬರಬೇಕಾದ ಅಗತ್ಯ ಇಲ್ಲ ಎಂದಿದ್ದಾರೆ.
undefined
ಕೆಲವರು ಇದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ಡಿಯೋಲ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
undefined
click me!